‘ಬಸದಿಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೂರುದಾರ ಹಾಗೂ ಅವರ ಕುಟುಂಬದವರು, ದೇವರ ಬೆಳ್ಳಿ ಸಾಮಗ್ರಿಗಳನ್ನು ಬಸದಿಗೆ ತಂದು ಪೂಜೆ ಮಾಡಿದ್ದರು. ಪೂಜೆ ಮುಗಿದ ನಂತರ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿ ಇರಿಸಿದ್ದರು. ಪ್ರಸಾದ ನೀಡಲೆಂದು ದೂರುದಾರ ಬಸದಿಯಿಂದ ಹೊರಗೆ ಹೋಗಿದ್ದರು. ಇದೇ ಸಂದರ್ಭದಲ್ಲೇ ಆರೋಪಿ, ಚೀಲವನ್ನು ಕದ್ದುಕೊಂಡು ಹೋಗಿದ್ದರು’ ಎಂದೂ ತಿಳಿಸಿದರು.