‘ಗಾಂಧೀಜಿ, ತಿಲಕ್ ಪ್ರಭಾವಕ್ಕೊಳಗಾಗಿದ್ದ ಶಾಸ್ತ್ರಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಜೈಲಿನಲ್ಲಿದ್ದಾಗ ಮಗಳು ತೀವ್ರತರ ಕಾಯಿಲೆಯಿಂದ ನರಳುತ್ತಾಳೆ. 15 ದಿನಗಳು ಪೆರೋಲ್ ಮೇಲೆ ಹೊರಬಂದು, ಮಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಆದರೆ, ಮಗಳು ಬದುಕುಳಿಯುವುದಿಲ್ಲ. ಅಂತ್ಯಸಂಸ್ಕಾರ ಮುಗಿಸಿ, ಪೆರೋಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ಜೈಲಿಗೆ ತಾವಾಗಿಯೇ ಹಿಂದಿರುಗುತ್ತಾರೆ. ಅವರಲ್ಲಿನ ಬದ್ಧತೆಗೆ ಇದು ಉದಾಹರಣೆಯಾಗಿದೆ’ ಎಂದು ಹೇಳಿದರು.