ಆದರೂ ಬೆಳ್ಳಹಳ್ಳಿ ಕ್ರಾಸ್ ರಸ್ತೆ ಬಳಿ ಯಾವುದೋ ಕಂಪನಿಯವರು ರಂಧ್ರ ಕೊರೆಯುವ ಎಚ್ಡಿಡಿ ಯಂತ್ರ ಬಳಸಿ ನೆಲದಡಿ ಕೇಬಲ್ ಅಳವಡಿಸುತ್ತಿದ್ದರು. ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್ ಅವರು ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳುವಾಗ ಶುಕ್ರವಾರ ರಾತ್ರಿ ರಂಧ್ರ ಕೊರೆಯುವುದು ಕಂಡುಬಂದಿತ್ತು. ತಕ್ಷಣವೇ ಅವರು ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ರಂಧ್ರ ಕೊರೆಯುವ ಯಂತ್ರ, ಲಾರಿ ಹಾಗೂ ಟ್ಯಾಂಕರ್ ವಶಕ್ಕೆ ಪಡೆಯುವಂತೆ ಸೂಚಿಸಿದ್ದರು.