ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿಎಂಕೆಎಸ್ವೈ) 2.0 ಅಡಿ 57 ತಾಲ್ಲೂಕುಗಳಲ್ಲಿ ಮಳೆ ನೀರು ಸಂಗ್ರಹ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಬರ ತಡೆಗಾಗಿ ಜಲಾನಯನ ಅಭಿವೃದ್ಧಿ ಯೋಜನೆಯಡಿ 100 ತಾಲ್ಲೂಕುಗಳನ್ನು ಮತ್ತು ಕೃಷಿಯ ಸ್ಥಿತಿ ಸ್ಥಾಪಕತ್ವಕ್ಕಾಗಿ ಜಲಾನಯನ ಪುನರುಜ್ಜೀವಗೊಳಿಸಲು 20 ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಈ ಯೋಜನೆಗಳಡಿ ಬರಪೀಡಿತವಾದ ಎಲ್ಲ ಪ್ರದೇಶಗಳನ್ನು ಒಳಪಡಿಸಲು ಸಾಧ್ಯವಾಗಿಲ್ಲ. ಕ್ಲಸ್ಟರ್ ಹಂತದಲ್ಲಿ ಮಾತ್ರ ಜಾರಿ ಆಗಿದೆ. ರಾಜ್ಯ ಸರ್ಕಾರ ಪ್ರಾಯೋಜಿತ ಜಲನಿಧಿ ಯೋಜನೆಯಡಿ ಎಲ್ಲ ಕಡೆಗಳಲ್ಲೂ ಮಳೆ ನೀರು ಸಂಗ್ರಹ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.