ಬೆಂಗಳೂರು: ಜಮ್ಮುವಿನಲ್ಲಿ ಸೈನಿಕರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣದ ಆರೋಪಿ ತಾಲಿಬ್ ಹುಸೇನ್ ಎಂಬಾತ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
‘ತಾಂತ್ರಿಕ ಸುಳಿವು ಆಧರಿಸಿ ನಗರಕ್ಕೆ ಬಂದಿದ್ದ ಕಾಶ್ಮೀರ ಪೊಲೀಸರ ತಂಡ, ತಾಲಿಬ್ನನ್ನು ಬಂಧಿಸಿ ಕರೆದೊಯ್ದಿದೆ’ ಎಂದು ನಗರದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಜಮ್ಮು ನಿವಾಸಿ ಆಗಿದ್ದ ತಾಲಿಬ್, 2 ವರ್ಷಗಳ ಹಿಂದೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನ ವಿರುದ್ಧ ಜಮ್ಮುವಿನ ಕಿಸ್ತವಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು ಎಂದರು.