‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ... ಹೀಗೆ ಹಲವು ಮುಖಂಡರ ಮುಖಗಳನ್ನು ಬೇರೆ ಚಿತ್ರಗಳ ಜೊತೆ ಸೇರಿಸಿ, ಅನಾಮಧೇಯ ಹೆಸರಿನಲ್ಲಿ ಹಲವು ತಿಂಗಳುಗಳಿಂದ ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು. ಅವಹೇಳನಕಾರಿಯಾಗಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿತ್ತು. ತೇಜೋವಧೆ, ಅವಹೇಳನ ಕುರಿತು ನಾನು ದೂರು ನೀಡಿದ್ದೆ’ ಎಂದು ಮುನಿರಾಜು ತಿಳಿಸಿದರು.