‘ಸಾಮರಸ್ಯಕ್ಕೆ ನಾಂದಿ ಹಾಡಿರುವ ಈ ಐತಿಹಾಸಿಕ ನಿರ್ಣಯವನ್ನು ಯಾರೂ ವಿರೋಧಿಸಬಾರದು. ಸ್ವಾರ್ಥ, ಸಂಕುಚಿತ ಮನೋಭಾವ ಬದಿಗಿಡಬೇಕು. ಎಲ್ಲರಿಗೂ ಲಾಭದಾಯಕವಾಗಿರುವ ಈ ನಿರ್ಧಾರವನ್ನು ಸರ್ವರೂ ಸ್ವಾಗತಿಸಬೇಕು. ಲಿಂಗಾಯತರ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಲಿರುವ ಮಹತ್ವದ ನಿರ್ಣಯವನ್ನು ವಿರೋಧಿಸುವುದು ಸರಿಯಲ್ಲ. ಯಾವುದೇ ಪಕ್ಷ, ಪಂಗಡಕ್ಕೆ ಸೇರಿದವರೂ ವಿರೋಧಿಸದೆ ಸಾಮರಸ್ಯ ಕಾಯ್ದುಕೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.