ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಮಾತನಾಡಿ, ‘ಒಳ್ಳೆಯ ನ್ಯಾಯಮೂರ್ತಿ ಆಗಬೇಕೆಂದರೆ ಅವರಿಗೆ ಅಂತಃಕರಣ ಇರಬೇಕಾಗುತ್ತದೆ. ನ್ಯಾಯಮೂರ್ತಿಗಳ ಮೇಲೆ ಮತ್ತೊಂದು ಕಾವಲು ವ್ಯವಸ್ಥೆ ಇಲ್ಲ. ಆದರೆ, ಅವರಿಗೆ ಆತ್ಮಸಾಕ್ಷಿಯೇ ಕಾವಲುಗಾರ. ಕಾವಲಿದ್ದವರಿಗೆ ನಮ್ಮ ತಪ್ಪುಗಳು ಗೊತ್ತಾಗದಿದ್ದರೂ, ನಮ್ಮ ಆತ್ಮಸಾಕ್ಷಿಗೆ ಗೊತ್ತಾಗಲಿದೆ. ಆತ್ಮಸಾಕ್ಷಿಯಂತೆ ನಡೆದುಕೊಂಡರೆ ಸಾಕು’ ಎಂದರು.