ಹಿಮಾಚಲ ಪ್ರದೇಶ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ರಾವ್, ‘ಮೀಸಲಾತಿ ವ್ಯವಸ್ಥೆ ಪ್ರತಿಭೆಗೆ ವಿರುದ್ಧವಾದುದು ಎಂಬ ಧೋರಣೆ ಕೆಲವರಲ್ಲಿದೆ. ಗಳಿಸುವ ಅಂಕಗಳು ಆಯಾ ವಿದ್ಯಾರ್ಥಿಗಳು ಹೊಂದಿದ್ದ ಅವಕಾಶಗಳನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿಯ ಸಾಮಾಜಿಕ ಹಿನ್ನೆಲೆ, ಇರುವ ಅವಕಾಶಗಳನ್ನು ಪರಿಗಣಿಸಿ ಮೀಸಲಾತಿ ನೀಡಲಾಗಿರುತ್ತದೆ. ಮೀಸಲಾತಿ ಪ್ರತಿಭೆಗೆ ವಿರುದ್ಧವಾದುದಲ್ಲ’ ಎಂದು ಅಭಿಪ್ರಾಯಪಟ್ಟರು.