‘ತಾಳೆ ಹಾಗೂ ತೆಂಗಿನ ಎಣ್ಣೆಯನ್ನು ಮರಿಗೆ ಸವರಿ, ಅಂಟು ಪದಾರ್ಥವನ್ನು ತೆಗೆಯಲಾಯಿತು. ನಂತರ ಬಕೆಟ್ನಲ್ಲಿ ನೀರು ತುಂಬಿಸಿ ಅದರಲ್ಲಿ ಹಾವಿನ ಮರಿ ಬಿಟ್ಟೆವು. ಅದು ಈಜಲು ಶಕ್ತವಾಗಿದೆ ಎಂದು ಖಾತರಿ ಆಯಿತು. ಸರಾಗವಾಗಿ ಚಲಿಸಲಿದೆ ಎಂದು ಮನದಟ್ಟಾದ ಬಳಿಕ ಬಿ.ಎಂ. ಕಾವಲ್ ಬಳಿ ಕಾಡಿಗೆ ಬಿಟ್ಟೆವು. ಈ ಕಾರ್ಯಕ್ಕೆ ಬಳಗದ ಸದಸ್ಯೆ ರಶ್ಮಿ ಮಾವಿನ ಕುರ್ವೆ ನೆರವಾದರು’ ಎಂದು ವಿವರಿಸಿದರು.