ಬೆಂಗಳೂರು: ಕಗ್ಗಲಿಪುರ ವ್ಯಾಪ್ತಿಯ ಬಿ.ಎಂ. ಕಾವಲ್ನಲ್ಲಿ 9 ಎಕರೆ 20 ಗುಂಟೆ ಒತ್ತುವರಿ ಪ್ರದೇಶವನ್ನು ರಾಜ್ಯ ಅರಣ್ಯ ಇಲಾಖೆ ತೆರವುಗೊಳಿಸಿದೆ.
ಭುವನ ಕಂಫರ್ಟ್ಸ್ ರಿಲೇಟರ್ನಿಂದ 6 ಎಕರೆ 18 ಗುಂಟೆ ಹಾಗೂ ಖೋಡೇಸ್ ಗ್ರೂಪ್ ವತಿಯಿಂದ 3 ಎಕರೆ 2 ಗುಂಟೆ ಅರಣ್ಯ ಪ್ರದೇಶ ಒತ್ತುವರಿ ಯಾಗಿತ್ತು. ಬೆಂಗಳೂರು ದಕ್ಷಿಣದ ಎಸಿಎಫ್, ಕಗ್ಗಲಿಪುರ ಆರ್ಎಫ್ಒ, ಉತ್ತರಹಳ್ಳಿ ಡಿಆರ್ಎಫ್ಒ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.