ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಜೊತೆಗೆಖಾಸಗಿ ವಲಯದಲ್ಲಿಯೂ ಸ್ಥಳೀಯ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಈ ಬಗ್ಗೆ ಕಾಯ್ದೆ ರೂಪಿಸುವಂತೆ ಪ್ರಾಧಿಕಾರವು ಸತತವಾಗಿ ಒತ್ತಾಯಿಸುತ್ತಿದೆ.ಪ್ರಸ್ತಾಪಿತ ನಿಯಮಾವಳಿಯಲ್ಲಿ 10ನೇ ತರಗತಿವರೆಗೆ ಕನ್ನಡದಲ್ಲಿ ಓದಿ ತೇರ್ಗಡೆಯಾಗಿರಬೇಕು, ರಾಜ್ಯದಲ್ಲಿ 15 ವರ್ಷಗಳು ನೆಲೆಸಿರಬೇಕು,ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಪ್ರಾತಿನಿಧ್ಯ ಒದಗಿಸಬೇಕು ಸೇರಿದಂತೆ ವಿವಿಧ ಅಂಶಗಳು ಅಡಕವಾಗಬೇಕು’ ಎಂದು ಆಗ್ರಹಿಸಿದರು.