ಈ ಬೆಳವಣಿಗೆಯಿಂದ ಎಚ್ಚೆತ್ತ ಗಣೇಶ್ ಬಾಗ್ ಕಟ್ಟಡದ ಆಡಳಿತ ಮಂಡಳಿ, ಇದೀಗ ಹೊಸ ಕಟೌಟ್ ಅಳವಡಿಸಿದೆ. ‘ಗುರು ಆನಂದ್ ಚಾತುರ್ಮಾಸ ಸಮಿತಿ – 2019, ಬೆಂಗಳೂರು ತಮಗೆ ಸುಸ್ವಾಗತವನ್ನು ಕೋರುತ್ತಿದೆ’ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅದರ ಕೆಳಗೆಯೇ ಹಿಂದಿ ಅಕ್ಷರಗಳನ್ನು ಸಹ ಮುದ್ರಿಸಲಾಗಿದೆ. ಈ ಹಿಂದೆ ಹೋರಾಟಗಾರರು ಕಿತ್ತು ಹಾಕಿದ್ದ ಕಟೌಟ್ನ ಭಾಗವನ್ನು ಹಾಗೇ ಬಿಡಲಾಗಿದೆ.