‘ಸಾಹಿತ್ಯಸಮ್ಮೇಳನವನ್ನು ಪರಿಷತ್ತು ಮತ್ತು ಸರ್ಕಾರ ಮಾತ್ರ ಆಚರಿಸುವುದಲ್ಲ. ಸಮಸ್ತ ಕನ್ನಡಿಗರೂ ಕನ್ನಡಿಗರ ಹಬ್ಬ ಎಂಬ ಭಾವನೆಯಿಂದ ಒಗ್ಗಟ್ಟಿನಿಂದ ಆಚರಿಸಬೇಕು. ಅರ್ಥಪೂರ್ಣ ಗೋ ಷ್ಠಿಗಳು,ಔಚಿತ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನುಡಿಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕು. ಹೀಗಾಗಿ, ಎಲ್ಲರ ಸಲಹೆ-ಸೂಚನೆಗಳನ್ನು ಸ್ವೀಕರಿಸಲು, ಸಹಕಾರವನ್ನು ಪಡೆಯಲು ಪರಿ ಷತ್ತಿನ ಅಧ್ಯಕ್ಷರುರಾಜ್ಯದಾದ್ಯಂತ ಜನ ಸಾಮಾನ್ಯರ, ಗಣ್ಯರ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಮಹನೀಯರುಗಳ ಮನೆಗೆ ಭೇಟಿ ನೀಡಲಿದ್ದಾರೆ’ ಎಂದು ಪರಿಷತ್ತಿನಗೌರವ ಕಾರ್ಯದರ್ಶಿನೇ.ಭ. ರಾಮಲಿಂಗಶೆಟ್ಟಿ ಅವರು ತಿಳಿಸಿದ್ದಾರೆ.