<p><strong>ಬೆಂಗಳೂರು</strong>: ‘ರಾಜಕೀಯ ಪಕ್ಷಗಳಿಗೆ ತತ್ವನಿಷ್ಠೆ, ಪಾರದರ್ಶಕ ಶುದ್ಧತೆ ಇಲ್ಲದ ಪರಿಣಾಮ ನಮ್ಮ ಪ್ರಜಾಪ್ರಭುತ್ವ ಅವನತಿಯ ಹಾದಿಯಲ್ಲಿ ಸಾಗುತ್ತಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು. </p>.<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೈಕೊ ಕನ್ನಡ ಬಳಗ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರಿಗೆ ‘ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. </p>.<p>‘ಅಮೆರಿಕದ ಪ್ರಜಾಪ್ರಭುತ್ವ ಎಷ್ಟು ವಿನಾಶವನ್ನು ಕಂಡಿದೆಯೋ, ಅಷ್ಟೆ ವಿನಾಶವನ್ನು ನಮ್ಮ ದೇಶದ ಪ್ರಜಾಪ್ರಭುತ್ವವೂ ಕಾಣುತ್ತಿದೆ. ಅಲ್ಲಿ ಅವಿವೇಕ ಅದಕ್ಕೆ ಕಾರಣವಾದರೆ, ಇಲ್ಲಿ ಜಾತೀಯತೆ ಮತ್ತು ಕೋಮುದೃಷ್ಟಿ ಕಾರಣವಾಗಿದೆ. ಪ್ರಜಾಪ್ರಭುತ್ವವು ಅವನತಿಯತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಅವರು ನೆನಪಿಗೆ ಬರುತ್ತಾರೆ. ಅಂತಹ ತಾತ್ವಿಕ ನಿಲುವಿನ ಚೇತನಗಳು ಯಾವ ಪಕ್ಷದಲ್ಲಿಯೂ ಈಗ ಕಾಣಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>‘ಜರ್ಮನಿಯ ರಾಬರ್ಡ್ ಬಾಷ್ ಅವರು ಘನತೆ, ಗೌರವದೊಂದಿಗೆ ಉದ್ಯಮವನ್ನು ಮುನ್ನಡೆಸಿದ್ದರು. ಅವರು ಉದ್ಯಮ ಸ್ಥಾಪಿಸಿದ ಕಡೆ ಸ್ಥಳೀಯರಿಗೆ ಉದ್ಯೋಗ ನೀಡಿ ಮಾದರಿಯಾಗಿದ್ದರು. ಈಗ ಉದ್ಯಮ ದಂಧೆಯಾಗಿದೆ. ಅವರ ಕಾಲದಲ್ಲಿ ಸಮಾಜಮುಖಿಯಾಗಿತ್ತು’ ಎಂದು ಸ್ಮರಿಸಿಕೊಂಡರು.</p>.<p>ಮೈಕೊ ಕನ್ನಡ ಬಳಗದ ಗೌರವಾಧ್ಯಕ್ಷೆ ಪದ್ಮಿನಿ ನಾಗರಾಜು, ‘ರೈತರ ಸಮಸ್ಯೆ ಬೇರೆ ಬೇರೆಯಿದ್ದು, ರೈತ ಚಳವಳಿ ನಿರಂತರ ನಡೆಯಲಿದೆ. ಸೂಪರ್ ಮಾರುಕಟ್ಟೆಗಳು ಬಂದ ಬಳಿಕ ನಿಜವಾದ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಪರಿಣಾಮ ರೈತರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಐಟಿ–ಬಿಟಿ ಉದ್ಯೋಗಿಗಳು ತೋಟ ಮಾಡಲು ಹೋಗಿ, ಬೆಳೆ ಬರುವ ಸಂದರ್ಭದಲ್ಲಿ ಸೂಕ್ತ ಬೆಲೆಯಿಲ್ಲದೆ ಕೈಸುಟ್ಟುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. </p>.<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಕೊ ಕನ್ನಡ ಬಳಗದ ಅಧ್ಯಕ್ಷ ಕೆ.ಎಸ್. ಶ್ರೀರಾಮತೀರ್ಥ, ಬಾಷ್ ಬಿಡದಿ ಘಟಕದ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಾಂತ್ ಪಾಟೀಲ ಮತ್ತು ಮೈಕೊ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜಕೀಯ ಪಕ್ಷಗಳಿಗೆ ತತ್ವನಿಷ್ಠೆ, ಪಾರದರ್ಶಕ ಶುದ್ಧತೆ ಇಲ್ಲದ ಪರಿಣಾಮ ನಮ್ಮ ಪ್ರಜಾಪ್ರಭುತ್ವ ಅವನತಿಯ ಹಾದಿಯಲ್ಲಿ ಸಾಗುತ್ತಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು. </p>.<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೈಕೊ ಕನ್ನಡ ಬಳಗ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರಿಗೆ ‘ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. </p>.<p>‘ಅಮೆರಿಕದ ಪ್ರಜಾಪ್ರಭುತ್ವ ಎಷ್ಟು ವಿನಾಶವನ್ನು ಕಂಡಿದೆಯೋ, ಅಷ್ಟೆ ವಿನಾಶವನ್ನು ನಮ್ಮ ದೇಶದ ಪ್ರಜಾಪ್ರಭುತ್ವವೂ ಕಾಣುತ್ತಿದೆ. ಅಲ್ಲಿ ಅವಿವೇಕ ಅದಕ್ಕೆ ಕಾರಣವಾದರೆ, ಇಲ್ಲಿ ಜಾತೀಯತೆ ಮತ್ತು ಕೋಮುದೃಷ್ಟಿ ಕಾರಣವಾಗಿದೆ. ಪ್ರಜಾಪ್ರಭುತ್ವವು ಅವನತಿಯತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಅವರು ನೆನಪಿಗೆ ಬರುತ್ತಾರೆ. ಅಂತಹ ತಾತ್ವಿಕ ನಿಲುವಿನ ಚೇತನಗಳು ಯಾವ ಪಕ್ಷದಲ್ಲಿಯೂ ಈಗ ಕಾಣಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>‘ಜರ್ಮನಿಯ ರಾಬರ್ಡ್ ಬಾಷ್ ಅವರು ಘನತೆ, ಗೌರವದೊಂದಿಗೆ ಉದ್ಯಮವನ್ನು ಮುನ್ನಡೆಸಿದ್ದರು. ಅವರು ಉದ್ಯಮ ಸ್ಥಾಪಿಸಿದ ಕಡೆ ಸ್ಥಳೀಯರಿಗೆ ಉದ್ಯೋಗ ನೀಡಿ ಮಾದರಿಯಾಗಿದ್ದರು. ಈಗ ಉದ್ಯಮ ದಂಧೆಯಾಗಿದೆ. ಅವರ ಕಾಲದಲ್ಲಿ ಸಮಾಜಮುಖಿಯಾಗಿತ್ತು’ ಎಂದು ಸ್ಮರಿಸಿಕೊಂಡರು.</p>.<p>ಮೈಕೊ ಕನ್ನಡ ಬಳಗದ ಗೌರವಾಧ್ಯಕ್ಷೆ ಪದ್ಮಿನಿ ನಾಗರಾಜು, ‘ರೈತರ ಸಮಸ್ಯೆ ಬೇರೆ ಬೇರೆಯಿದ್ದು, ರೈತ ಚಳವಳಿ ನಿರಂತರ ನಡೆಯಲಿದೆ. ಸೂಪರ್ ಮಾರುಕಟ್ಟೆಗಳು ಬಂದ ಬಳಿಕ ನಿಜವಾದ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಪರಿಣಾಮ ರೈತರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಐಟಿ–ಬಿಟಿ ಉದ್ಯೋಗಿಗಳು ತೋಟ ಮಾಡಲು ಹೋಗಿ, ಬೆಳೆ ಬರುವ ಸಂದರ್ಭದಲ್ಲಿ ಸೂಕ್ತ ಬೆಲೆಯಿಲ್ಲದೆ ಕೈಸುಟ್ಟುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. </p>.<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಕೊ ಕನ್ನಡ ಬಳಗದ ಅಧ್ಯಕ್ಷ ಕೆ.ಎಸ್. ಶ್ರೀರಾಮತೀರ್ಥ, ಬಾಷ್ ಬಿಡದಿ ಘಟಕದ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಾಂತ್ ಪಾಟೀಲ ಮತ್ತು ಮೈಕೊ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>