ಮೊದಲು ಸ್ವರ್ಗಕ್ಕೆ ಹೋಗಲಿ: ಅಗಲಿದ ಸದಸ್ಯರಿಗೆ ಸಂತಾಪ ಸೂಚಿಸಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಅವರು ಮುನಿರತ್ನ ಹಾಗೂ ಬೈರತಿ ಬಸವರಾಜ್ ಜತೆಗೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ವಿಧಾನಸಭಾಧ್ಯಕ್ಷರು, ‘ಹೆಬ್ಬಾರ್ ಸುಮ್ಮನಿರಿ, ಸ್ವರ್ಗಕ್ಕೆ ಹೋಗುವವರು ಮೊದಲು ಹೋಗಲಿ. ನೀವು ಅಡ್ಡಿ ಉಂಟು ಮಾಡಬೇಡಿ. ಬಳಿಕ ಮಾತನಾಡಿ’ ಎಂದರು.