ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಸೇರಿದ್ದ ಪ್ರತಿಭಟನಕಾರರು ‘ಕ್ರೈಸ್ತರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಮುತಾಲಿಕ್ ಹಾಗೂ ಇತರರನ್ನು ಬಂಧಿಸಿ’, ‘ನೂರಾರು ಪ್ರಕರಣಗಳನ್ನು ಎದುರಿಸುತ್ತಿರುವ ಮುತಾಲಿಕ್ ಅವರನ್ನು ಜೈಲಿಗೆ ಹಾಕಿ’, ‘ಕ್ರೈಸ್ತರ ವಿರುದ್ಧ ಆಧಾರರಹಿತವಾಗಿ ಮತಾಂತರದ ಆರೋಪ ಮಾಡುವ ಸ್ವಯಂಘೋಷಿತ ಹಿಂದೂ ಮುಖಂಡರನ್ನು ಬಂಧಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.