‘ಮಹಾಜನ ಆಯೋಗಕ್ಕೂ ಮುನ್ನ ಫಜಲ್ ಆಲಿ ಆಯೋಗ ನೀಡಿದ್ದ ವರದಿಯಲ್ಲಿ ಲಾತೂರು, ಕೊಲ್ಲಾಪುರ, ಸೊಲ್ಲಾಪುರ, ಚಂದಗಡ, ಈಚಲಕರಂಜಿ, ಪಂಡರಾಪುರ ಕೂಡ ಕರ್ನಾಟಕಕ್ಕೆ ಸೇರಬೇಕು ಎಂದು ತಿಳಿಸಲಾಗಿತ್ತು. ಲೋಕಸಭೆಯಲ್ಲಿ ಈ ವರದಿ ಮಂಡನೆಯಾಗಿತ್ತು. ಮಹಾರಾಷ್ಟ್ರದ ಸದಸ್ಯರು ಗದ್ಧಲ ಎಬ್ಬಿಸಿದ್ದರಿಂದ ಮಹಾಜನ್ ಆಯೋಗ ಅಸ್ಥಿತ್ವಕ್ಕೆ ಬಂತು. ಮಹಾಜನ್ ಆಯೋಗದ ಮೂಲಕ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲೇ ಉಳಿಸಿಕೊಳ್ಳಲಾಗಿದೆ. ಆದರೂ, ಮತ್ತೆ ಕನ್ನಡಿಗರನ್ನು ಕೆಣಕುವ ಪ್ರಯತ್ನವನ್ನು ಮಹಾರಾಷ್ಟ್ರ ಮಾಡುತ್ತಿದೆ’ ಎಂದು ಅವರು ದೂರಿದ್ದಾರೆ.