<p><strong>ಬೆಂಗಳೂರು:</strong> ‘ಅಕಾಡೆಮಿಗಳ ಪಾವಿತ್ರ್ಯ ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದ್ದು, ಯಾವುದೇ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಿದೆ’ ಎಂದು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್.ಮಂಜುನಾಥ ಸ್ವಾಮಿ ತಿಳಿಸಿದರು.</p>.<p>ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಶಸ್ತಿಗಾಗಿ ಎಷ್ಟೋ ಜನರು ಶಿಫಾರಸು ಮಾಡಿಸುತ್ತಾರೆ. ಪ್ರತಿಯೊಂದು ಅಕಾಡೆಮಿಯು ಸಾಧಕರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿದೆ. ಪ್ರತಿ ಉಪ ವಿಭಾಗಗಳಿಗೂ ಅಕಾಡೆಮಿ ಸ್ಥಾಪಿಸಿದರೆ, ಅಕಾಡೆಮಿಗಳು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ’ ಎಂದು ತಿಳಿಸಿದರು.</p>.<p>‘ಸಂಗೀತ ಮತ್ತು ನೃತ್ಯಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ಸೂಕ್ತ ಕಾರಣಗಳೊಂದಿಗೆ ಪ್ರಸ್ತಾವ ಸಲ್ಲಿಸಿದರೇ, ಸರ್ಕಾರದ ಗಮನಕ್ಕೆ ತರಲಾಗುವುದು. ಇನ್ನೇನು ಪದ್ಮ ಪ್ರಶಸ್ತಿಗೆ ಆಯ್ಕೆ ಪ್ರಾರಂಭವಾಗುತ್ತದೆ. ಈಗಾಗಲೇ ಪ್ರಶಸ್ತಿಗೆ ಶಿಫಾರಸುಗಳು ಬರುತ್ತಿವೆ. ಸಮಾಜವೇ ಸಾಧಕರನ್ನು ಗುರುತಿಸಿ, ಆಯ್ಕೆ ಮಾಡುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಿದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಉಪಸ್ಥಿತರಿದ್ದರು.</p>.<h2>ಪ್ರಶಸ್ತಿ ಪುರಸ್ಕೃತರು</h2><p>ಲೋಕೇಶ್ ದಾಸ್ (ಕಥಾಕೀರ್ತನ) ಪ್ರೊ. ಮಧೂರ ಮೋಹನ ಕಲ್ಲೂರಾಯ (ಗಮಕ ವಾಚನ) ಅವರಿಗೆ ತಲಾ ₹50 ಸಾವಿರ ನಗದು ಸಹಿತ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ನೀಡಲಾಯಿತು.</p><p><strong>ವಾರ್ಷಿಕ ಪ್ರಶಸ್ತಿ:</strong> 'ಕರ್ನಾಟಕ ಸಂಗೀತ': ಡಾ. ಹಂಸಿನಿ ನಾಗೇಂದ್ರ (ಗಾಯನ) ನಾಗೇಶ್ ಎ.ಬಪ್ಪನಾಡು (ನಾದಸ್ವರ) ಎ.ವಿ.ವಿಶ್ವನಾಥ (ಹಾರ್ಮೋನಿಯಂ) ಎಂ.ವೆಂಕಟರಾಜು (ಡೋಲು)</p><p><strong>ಹಿಂದೂಸ್ತಾನಿ ಸಂಗೀತ:</strong> ಮೃತ್ಯುಂಜಯ ಶೆಟ್ಟರ್ ರವೀಂದ್ರ ಸೊರಗಾವಿ (ಗಾಯನ) ಪಂಚಾಕ್ಷರಿ ಅಣ್ಣೀಗೇರಿ (ಹಾರ್ಮೋನಿಯಂ) ವಿಠ್ಠಲ ಸಿದ್ದಪ್ಪ ಪೂಜಾರ (ತಬಲಾ)</p><p><strong>ನೃತ್ಯ:</strong> ನಾಗರತ್ನ ಹಡಗಲಿ ಸಿ.ಆರ್.ಶಿವಪ್ರಕಾಶ್ (ಭರತನಾಟ್ಯ) ಎಸ್.ಕೆ.ಆರ್.ಜಿಲಾನಿ ಭಾಷಾ ಹಾಗೂ ಪಿ.ರಾಮಯ್ಯ (ಕಥಾ ಕೀರ್ತನ ತಬಲಾ) ವಿಶ್ವನಾಥ ಕುಲಕರ್ಣಿ (ಗಮಕ ವಾಚನ) ಶ್ರೀಧರ್ ಅಯ್ಯರ್ (ಸುಗಮ ಸಂಗೀತ) ಎಂ.ಕೃಷ್ಣಮೂರ್ತಿ (ವಾದ್ಯ ತಯಾರಿಕೆ). ಕೊಪ್ಪಳ ಜಿಲ್ಲೆಯ ಕಲ್ಮಠದ ಕೊಟ್ಟೂರೇಶ್ವರ ಸಂಗೀತ ಮಹಾವಿದ್ಯಾಲಯಕ್ಕೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಕಾಡೆಮಿಗಳ ಪಾವಿತ್ರ್ಯ ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದ್ದು, ಯಾವುದೇ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಿದೆ’ ಎಂದು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್.ಮಂಜುನಾಥ ಸ್ವಾಮಿ ತಿಳಿಸಿದರು.</p>.<p>ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಶಸ್ತಿಗಾಗಿ ಎಷ್ಟೋ ಜನರು ಶಿಫಾರಸು ಮಾಡಿಸುತ್ತಾರೆ. ಪ್ರತಿಯೊಂದು ಅಕಾಡೆಮಿಯು ಸಾಧಕರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿದೆ. ಪ್ರತಿ ಉಪ ವಿಭಾಗಗಳಿಗೂ ಅಕಾಡೆಮಿ ಸ್ಥಾಪಿಸಿದರೆ, ಅಕಾಡೆಮಿಗಳು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ’ ಎಂದು ತಿಳಿಸಿದರು.</p>.<p>‘ಸಂಗೀತ ಮತ್ತು ನೃತ್ಯಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ಸೂಕ್ತ ಕಾರಣಗಳೊಂದಿಗೆ ಪ್ರಸ್ತಾವ ಸಲ್ಲಿಸಿದರೇ, ಸರ್ಕಾರದ ಗಮನಕ್ಕೆ ತರಲಾಗುವುದು. ಇನ್ನೇನು ಪದ್ಮ ಪ್ರಶಸ್ತಿಗೆ ಆಯ್ಕೆ ಪ್ರಾರಂಭವಾಗುತ್ತದೆ. ಈಗಾಗಲೇ ಪ್ರಶಸ್ತಿಗೆ ಶಿಫಾರಸುಗಳು ಬರುತ್ತಿವೆ. ಸಮಾಜವೇ ಸಾಧಕರನ್ನು ಗುರುತಿಸಿ, ಆಯ್ಕೆ ಮಾಡುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಿದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಉಪಸ್ಥಿತರಿದ್ದರು.</p>.<h2>ಪ್ರಶಸ್ತಿ ಪುರಸ್ಕೃತರು</h2><p>ಲೋಕೇಶ್ ದಾಸ್ (ಕಥಾಕೀರ್ತನ) ಪ್ರೊ. ಮಧೂರ ಮೋಹನ ಕಲ್ಲೂರಾಯ (ಗಮಕ ವಾಚನ) ಅವರಿಗೆ ತಲಾ ₹50 ಸಾವಿರ ನಗದು ಸಹಿತ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ನೀಡಲಾಯಿತು.</p><p><strong>ವಾರ್ಷಿಕ ಪ್ರಶಸ್ತಿ:</strong> 'ಕರ್ನಾಟಕ ಸಂಗೀತ': ಡಾ. ಹಂಸಿನಿ ನಾಗೇಂದ್ರ (ಗಾಯನ) ನಾಗೇಶ್ ಎ.ಬಪ್ಪನಾಡು (ನಾದಸ್ವರ) ಎ.ವಿ.ವಿಶ್ವನಾಥ (ಹಾರ್ಮೋನಿಯಂ) ಎಂ.ವೆಂಕಟರಾಜು (ಡೋಲು)</p><p><strong>ಹಿಂದೂಸ್ತಾನಿ ಸಂಗೀತ:</strong> ಮೃತ್ಯುಂಜಯ ಶೆಟ್ಟರ್ ರವೀಂದ್ರ ಸೊರಗಾವಿ (ಗಾಯನ) ಪಂಚಾಕ್ಷರಿ ಅಣ್ಣೀಗೇರಿ (ಹಾರ್ಮೋನಿಯಂ) ವಿಠ್ಠಲ ಸಿದ್ದಪ್ಪ ಪೂಜಾರ (ತಬಲಾ)</p><p><strong>ನೃತ್ಯ:</strong> ನಾಗರತ್ನ ಹಡಗಲಿ ಸಿ.ಆರ್.ಶಿವಪ್ರಕಾಶ್ (ಭರತನಾಟ್ಯ) ಎಸ್.ಕೆ.ಆರ್.ಜಿಲಾನಿ ಭಾಷಾ ಹಾಗೂ ಪಿ.ರಾಮಯ್ಯ (ಕಥಾ ಕೀರ್ತನ ತಬಲಾ) ವಿಶ್ವನಾಥ ಕುಲಕರ್ಣಿ (ಗಮಕ ವಾಚನ) ಶ್ರೀಧರ್ ಅಯ್ಯರ್ (ಸುಗಮ ಸಂಗೀತ) ಎಂ.ಕೃಷ್ಣಮೂರ್ತಿ (ವಾದ್ಯ ತಯಾರಿಕೆ). ಕೊಪ್ಪಳ ಜಿಲ್ಲೆಯ ಕಲ್ಮಠದ ಕೊಟ್ಟೂರೇಶ್ವರ ಸಂಗೀತ ಮಹಾವಿದ್ಯಾಲಯಕ್ಕೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>