ಮೈಸೂರಿಗೆ ಬಂದ ತಮ್ಮ ಪಕ್ಷದ ಅಧ್ಯಕ್ಷರನ್ನು ರಾಜಕಾರಣಿಯೊಬ್ಬರು ಹುಲಿಗೆ ಹೋಲಿಸಿದ್ದಾರೆ. ಫೆ. 4 ರಂದು ‘ಸಿಂಹ’ವೂ ಬರಲಿದೆ ಎಂದು ಘೋಷಿಸಿದ್ದಾರೆ (ಪ್ರ.ವಾ., ಜ. 27). ಹಾಗಾದರೆ ಹೀಗೆ ಹೇಳಿಕೆ ನೀಡಿದವರು ಯಾವ ಪ್ರಾಣಿಗೆ ಹೋಲಿಕೆಯಾಗುತ್ತಾರೆ? ಅಥವಾ ಜನ ಅವರನ್ನು ಯಾವ ಪ್ರಾಣಿಗೆ ಹೋಲಿಸಬೇಕು?
ಕಾಡಿನ ಪ್ರತಿ ಪ್ರಾಣಿಗೂ ತನ್ನದೇ ಆದ ಘನತೆ, ಗಾಂಭೀರ್ಯವಿದೆ. ಜನರನ್ನು ಅವುಗಳಿಗೆ ಹೋಲಿಸಿ ಅವುಗಳ ‘ಮಾನ’ ತೆಗೆಯದಿರಿ!