ಬುಧವಾರ ಮಧ್ಯಾಹ್ನದ ನಂತರ ಕಲಾಪ ಆರಂಭವಾಗುತ್ತಿದ್ದಂತೆ, ‘ಸದ್ಯ ಸದನದಲ್ಲಿ ಆರು ಸಚಿವರು ಹಾಜರಿದ್ದಾರೆ’ ಎಂದು ಸಭಾಪತಿಗೆ ಕೋಟ ಅವರು ಮಾಹಿತಿ ನೀಡಿದರು. ಅದಕ್ಕೆ ಸಭಾಪತಿ, ‘ಈ ಕೆಲಸ ಮೊದಲು ಮಾಡಬೇಕಿತ್ತು. ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಬಗ್ಗೆ ಸಭಾ ನಾಯಕರು ಮತ್ತು ಮುಖ್ಯ ಸಚೇತಕರು ನಿಗಾ ವಹಿಸಬೇಕು’ ಎಂದರು.