ಬೆಂಗಳೂರು: ‘ನಾಲ್ಕು ವರ್ಷಗಳಿಂದ ಮಳೆಯಿಂದ ನಲುಗಿರುವ ರಾಜ್ಯಕ್ಕೆ ಕೇಂದ್ರದಿಂದ ಬಂದ ಪರಿಹಾರವೆಷ್ಟು? ಸ್ಮಾರ್ಟ್ ಸಿಟಿ, ಜಲಜೀವನ ಮಿಷನ್, ಎರಡು ಕೋಟಿ ಉದ್ಯೋಗ, ರೈತರ ಆದಾಯ ಇಮ್ಮಡಿ, ಎಲ್ಲರಿಗೂ ಸ್ವಂತ ಸೂರು ಸೇರಿದಂತೆ ಯಾವುದು ಪೂರ್ಣಗೊಂಡಿದೆ? ಉಪನಗರ ರೈಲು ಯೋಜನೆಗೆ ಎಷ್ಟು ಹಣ ನೀಡಿದ್ದೀರಿ?’ ಸೇರಿದಂತೆ 15 ಪ್ರಶ್ನೆಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.