‘ನೇಮಕಾತಿ ವಿಭಾಗದ ‘ಡಿಐಜಿ’ ಅವರ ಆಪ್ತ ಸಹಾಯಕ ಶ್ರೀನಿವಾಸ್ ಎಂಬಾತನನ್ನೂ ಬಂಧಿಸಲಾಗಿದೆ. ನಗರ ಸಶಸ್ತ್ರ ಮೀಸಲು (ಸಿಎಆರ್) ಪಡೆಯ ಹೆಡ್ ಕಾನ್ಸ್ಟೆಬಲ್ ಆಗಿದ್ದ ಶ್ರೀನಿವಾಸ್, ನಿಯೋಜನೆ ಮೇರೆಗೆ ಹಲವು ವರ್ಷಗಳ ಹಿಂದೆ ನೇಮಕಾತಿ ವಿಭಾಗಕ್ಕೆ ಬಂದಿದ್ದ. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಅಕ್ರಮಕ್ಕೆ ಸಹಕಾರ ನೀಡುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.