‘ಕೆಎಎಸ್ ಕಿರಿಯ ಶ್ರೇಣಿ ಪ್ರೊಬೇಷನರಿ ಅಧಿಕಾರಿಯು ಪರೀಕ್ಷಾರ್ಥ ಅವಧಿಯಲ್ಲಿ ಸಾಮಾನ್ಯವಾಗಿ ಯಾವುದಾದರೂ ಐಎಎಸ್ ಅಧಿಕಾರಿಯ ಅಧೀನದಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಅಂದರೆ ಉಪವಿಭಾಗಾಧಿಕಾರಿಗಿಂತ ಕಡಿಮೆ ಹಂತದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್, ತಹಶೀಲ್ದಾರ್ ಹುದ್ದೆಗಳನ್ನು ಸ್ವತಂತ್ರವಾಗಿ ನಿಭಾಯಿಸಬೇಕಾಗುತ್ತದೆ. ಆ ಬಳಿಕವಷ್ಟೇ ಸ್ವತಂತ್ರ ಕಾರ್ಯನಿರ್ವಹಣೆಯ ಉಪವಿಭಾಗಾಧಿ ಕಾರಿ ಹುದ್ದೆಯನ್ನು ಅವರಿಗೆ ಹಂಚಿಕೆ ಮಾಡಬೇಕು. ಆದರೆ,ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ–2 ಆಗಿದ್ದ ಹಿರೇಮಠ ವಿಚಾರದಲ್ಲಿ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗಿದೆ’ ಎಂದು ಕೆಲವು ಅಧಿಕಾರಿಗಳು ದೂರಿದ್ದಾರೆ.