‘ಬೆಂಗಳೂರಿನಲ್ಲಿ ಎಲ್ಲ ರೌಡಿಗಳು ಸತ್ತಿದ್ದಾರೆ. ಈಗ ಯಾರೂ ಇಲ್ಲ’ ಎಂದು ಹೇಮಂತ್ ಹೇಳಿದ್ದರು. ಅದನ್ನು ಕೇಳಿಸಿಕೊಂಡು ಹೇಮಂತ್ ಬಳಿ ಹೋಗಿದ್ದ ರಿಜ್ವಾನ್ ಸಹಚರರು, ‘ನಮ್ಮ ಬಾಸ್ ಇದ್ದಾರೆ’ ಎಂದು ಜೋರಾಗಿ ಹೇಳಿದ್ದರು. ಬಾಸ್ ಯಾರೆಂಬುದೇ ಗೊತ್ತಿಲ್ಲವೆಂದು ಹೇಮಂತ್ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಹೇಮಂತ್ ಅವರನ್ನು ಕೊಲೆ ಮಾಡಿದ್ದರು. ಅದರ ವಿಡಿಯೊವನ್ನು ಚಿತ್ರೀಕರಿಸಿ ರಿಜ್ವಾನ್ಗೆ ಕಳುಹಿಸಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.