ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಶಿವಶಂಕರ್,‘ರಾಜ್ಯದಲ್ಲಿರುವ ಕೆಎಫ್ಸಿಎಸ್ಸಿ 191 ಗೋದಾಮುಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ಸಿಗಬೇಕಿರುವ ಕನಿಷ್ಠ ಸವಲತ್ತುಗಳನ್ನು ಈವರೆಗೆ ನೀಡಿಲ್ಲ’ ಎಂದು ದೂರಿದರು.