ಕೆ.ಆರ್.ಪುರ:ಕೋವಿಡ್ ಅವಧಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೋವಿಡ್ ಸೇನಾನಿಗಳಿಗೆಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದಪಾದ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವಿಜಿನಾಪುರದಲ್ಲಿ ಮಂಗಳವಾರ ನಡೆಯಿತು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ವೆಂಕಟರೆಡ್ಡಿ,‘ಕೋವಿಡ್ ಸಮಯದಲ್ಲಿ ವೈದ್ಯರ ಸೇವೆ ಶ್ಲಾಘನೀಯ. ಯಾವುದೇ ರಜೆ ತೆಗೆದುಕೊಳ್ಳದೆ, ನಿರಂತರವಾಗಿ ಲಸಿಕಾ ಅಭಿಯಾನದಲ್ಲಿ ತೊಡಗಿದ್ದಾರೆ. ಅವರಿಗೆ ಪಾದ ಪೂಜೆ ಮಾಡಿ ಗೌರವಿಸುವುದು ಒಳ್ಳೆಯ ಕೆಲಸ’ ಎಂದರು.
ಬಿಜೆಪಿ ಸ್ಥಳೀಯ ಮುಖಂಡಬಂಡೆ ಎಸ್.ರಾಜು,‘ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 95ರಷ್ಟು ಲಸಿಕಾ ಪೂರ್ಣಗೊಳಿಸಿರುವವಾರ್ಡ್ ವಿಜಿನಾಪುರ’ ಎಂದು ಹೇಳಿದರು.