ನೆಹರೂ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಬಿಜೆಪಿಯವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಶೇ 40ರಷ್ಟು ಕಮಿಷನ್ ಲಂಚ ಹೊಡೆಯಲು ಮಾತ್ರ ಅಧಿಕಾರ ಬೇಕಾಗಿದ್ದು, ಇವರ ಆಡಳಿತಾವಧಿಯಲ್ಲಿ ಅಂಬಾನಿ, ಅದಾನಿಯಂತವರ ಆಸ್ತಿಮೌಲ್ಯ ಹೆಚ್ಚುತ್ತಿದೆಯೇ ಹೊರತು, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಇದೇ ಬಿಜೆಪಿಯವರ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.