ಬಳಿಕ ಮಾತನಾಡಿದ ಅವರು,' ಈ ಭ್ರಷ್ಟ ಪಕ್ಷಾಂತರಿಗಳು, ಅವಕಾಶವಾದಿ ಹಾಗೂ ಹಣದ ಹಪಾಹಪಿ ಹೊಂದಿರುವ ರಾಜಕಾರಣಿಗಳ ಬಗ್ಗೆ ಜನರಿಗೆ ತಿಳಿಸಿ, ಪ್ರಾಮಾಣಿಕ ರಾಜಕೀಯದ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಕ್ಕಿರುವ ಅವಕಾಶ ಇದು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇದನ್ನು ಸದ್ಬಳಕೆ ಮಾಡಿಕೊಳ್ಳಲಿ' ಎಂದು ಶುಭ ಹಾರೈಸಿದರು.