ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಲೋಕೇಶ್ ಮಾತನಾಡಿ, ‘ಶಿವಶಂಕರ್ ಆರೋಪಗಳು ಆಧಾರರಹಿತ. ಇಂತಹ ಅಪಪ್ರಚಾರಗಳಿಂದ ಸಂಸ್ಥೆಯ ಉತ್ಪನ್ನಗಳ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಇತ್ತೀಚಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ದೀರ್ಘಕಾಲದಿಂದ ಮೈಸೂರು ಸ್ಯಾಂಡಲ್ ಸೋಪ್ ಬಳಸುತ್ತಿದ್ದು, ಇದೀಗ ಸೋಪ್ ಬಳಕೆಗೆ ಹಿಂಜರಿಯುತ್ತಿದ್ದೇನೆ ಎಂದು ಹೇಳಿರುವುದು ಸರಿಯಲ್ಲ. ಇದರಿಂದ ಉತ್ಪನ್ನಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತದೆ’ ಎಂದರು.