ಬಸ್ಗಳ ಆಸನ, ಕಂಬಿಗಳು, ದ್ವಾರಗಳು, ರೈಲು ಮತ್ತು ಮೆಟ್ರೋ ನಿಲ್ದಾಣಗಳನ್ನು ಒದ್ದೆ ಬಟ್ಟೆಯಿಂದ ಆಗಾಗ ಒರೆಸುವುದು ಕಂಡುಬಂತು. ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಬಸ್ ಡಿಪೊಗಳಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಿದರು. ಬಿಎಂಟಿಸಿ ಚಾಲಕ ಯೋಗೇಶ್ ಗೌಡ ಎಂಬುವರು ಬುಧವಾರ ಸುಮಾರು 250 ಮಾಸ್ಕ್ ಖರೀದಿಸಿ ಶಾಂತಿನಗರ ಬಸ್ ನಿಲ್ದಾಣದಲ್ಲಿ ಚಾಲನಾ ಸಿಬ್ಬಂದಿಗೆ ವಿತರಿಸಿದರು.