ನಗದು ಮತ್ತು ಅಭಿನಂದನಾ ಪತ್ರವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ನೀಡಿ ಗೌರವಿಸಿದರು. ‘ಮಾನವೀಯ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಚಾಲಕ ಮಂಜುನಾಥ್ ಅವರೇ ಜೀವಂತ ಉದಾಹರಣೆ. ಈಜು ಬರುವವರೇ ನೀರಿಗೆ ಇಳಿಯಲು ಹಲವು ಬಾರಿ ಯೋಚಿಸುತ್ತಾರೆ. ಮಂಜುನಾಥ್ ಅವರು ಬಸ್ನಲ್ಲಿ 40 ಜನ ಇದ್ದರೂ ಬೇರೆಯವರಿಗೆ ಕಾಯದೆ ತಾವೇ ನೀರಿನಲ್ಲಿ ಜಿಗಿದು ಮಕ್ಕಳ ಪ್ರಾಣ ರಕ್ಷಿಸಿದ್ದಾರೆ. ಅವರಿಗೆ ನೀಡಿರುವ ನಗದು ಪುರಸ್ಕಾರ ಅವರ ಕಾರ್ಯಕ್ಕೆ ಸಮವಲ್ಲ. ಆದರೂ ಅವರನ್ನು ಗೌರವಿಸುವ ಕೆಲಸ ಮಾಡಿದ್ದೇವೆ’ ಎಂದರು.