ಬೆಂಗಳೂರಿನಿಂದ ಪ್ರತಿದಿನ ರಾತ್ರಿ 10 ಗಂಟೆಗೆ ಹೊರಡುವ ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್, ಬೆಳಗಿನ ಜಾವ 4.30ಕ್ಕೆ ಹೊಸಪೇಟೆ ತಲುಪಲಿದೆ. ವಿಶ್ರಾಂತಿ, ಉಪಾಹಾರದ ಬಳಿಕ ಹಂಪಿಗೆ ತೆರಳಿ ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೆಕಾಳು ಗಣೇಶ, ಲಕ್ಷ್ಮಿ ನರಸಿಂಹ, ಬಡವಲಿಂಗ, ಅಶ್ವಶಾಲೆ, ಕಲ್ಯಾಣಿ, ಕಮಲ ಮಹಲ್, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳ ವೀಕ್ಷಣೆ ಮಾಡಿಸಲಾಗುವುದು.