ಜುಲೈ 23ರಿಂದ ಈ ಪ್ಯಾಕೇಜ್ ಪ್ರವಾಸ ಆರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ‘ಕರ್ನಾಟಕ ಸಾರಿಗೆ’ ಬಸ್, ಮದ್ದೂರು (ಉಪಾಹಾರ) ಮಾರ್ಗದಲ್ಲಿ ಸಾಗಿ, 9 ಗಂಟೆಗೆ ಸೋಮನಾಥಪುರ ತಲುಪಲಿದೆ. ಅಲ್ಲಿಂದ ತಲಕಾಡು ಪಂಚಲಿಂಗ ದರ್ಶನ(ಮಧ್ಯಾಹ್ನದ ಊಟ), ಮಧ್ಯರಂಗ, ರಂಗನಾಥಸ್ವಾಮಿ ದರ್ಶನ, ಭರಚುಕ್ಕಿ, ಗಗನಚುಕ್ಕಿ ವೀಕ್ಷಣೆ ಮುಗಿಸಿ ಸಂಜೆ 6.15ಕ್ಕೆ ಗಗನಚುಕ್ಕಿಯಿಂದ ಹೊರಡಲಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರು ತಲುಪಲಿದೆ.