‘ವೃದ್ಧೆ ಶ್ರೀಲಕ್ಷ್ಮಿ, ವೈದ್ಯರಾಗಿರುವ ಮಗಳ ಜೊತೆ ನೆಲೆಸಿದ್ದರು. ಆರೋಪಿ ಸುಧಂಶುನ ಅಕ್ಕ, ವೃದ್ಧೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಮಗಳು ಕ್ಲಿನಿಕ್ಗೆ ಹೋದಾಗ ವೃದ್ಧೆಯೊಬ್ಬರೇ ಮನೆಯಲ್ಲಿರುತ್ತಾರೆಂಬ ಮಾಹಿತಿ ಆರೋಪಿಗೆ ಗೊತ್ತಿತ್ತು. ಹೀಗಾಗಿ, ಮನೆಗೆ ನುಗ್ಗಿ ದರೋಡೆ ಮಾಡಲು ಆರೋಪಿ ಸಂಚು ರೂಪಿಸಿದ್ದ. ಇದಕ್ಕಾಗಿ ಒಡಿಶಾದಲ್ಲಿರುವ ಸ್ನೇಹಿತರ ಸಹಾಯ ಪಡೆದಿದ್ದ. ಜ. 3ರಂದು ಮಗಳು ಕ್ಲಿನಿಕ್ಗೆ ಹೋಗಿದ್ದರು. ಅಂದು ಸಂಜೆ ಮನೆಗೆ ನುಗ್ಗಿದ್ದ ಆರೋಪಿಗಳು, ಶ್ರೀಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದರು. ಕೈ–ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದರು. ನಂತರ, ಚಿನ್ನಾಭರಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.