‘ಪರಿಚಯಸ್ಥರೇ ಆಗಿದ್ದ ಮಂಜುನಾಥ್ ಹಾಗೂ ಕುಣಿಗಲ್ ಗಿರಿ ನಡುವೆ ವೈಷಮ್ಯ ಬೆಳೆದಿತ್ತು. ಗಿರಿ ಬಗ್ಗೆ ಸ್ನೇಹಿತರ ಬಳಿ ಮಂಜುನಾಥ್ ಹೀಯಾಳಿಸಿ ಮಾತನಾಡಿದ್ದರು. ಒಂದು ಗತಿ ಕಾಣಿಸುವುದಾಗಿಯೂ ಹೇಳಿದ್ದರು. ಅದು ತಿಳಿಯುತ್ತಿದ್ದಂತೆ ಗಿರಿ, ಸೈಕೊ ವಿಶ್ವನಾಥ್ಗೆ ವಿಷಯ ತಿಳಿಸಿದ್ದ. ಮಂಜುನಾಥ್ನಿಗೆ ಬೆದರಿಕೆ ಹಾಕಿ ಬುದ್ದಿ ಕಲಿಸುವಂತೆ ಸೂಚಿಸಿದ್ದ’ ಎಂದೂ ಅಧಿಕಾರಿ ತಿಳಿಸಿದರು.