ಪುಸ್ತಕ ಪ್ರಕಟಣೆ ಸೇರಿ ವಿವಿಧ ಯೋಜನೆ ಹಮ್ಮಿಕೊಂಡಿದ್ದು ಅವುಗಳಿಗೆ ಅನುದಾನ ಹೊಂದಿಸಬೇಕಿದೆ. ಅನುದಾನದ ಲಭ್ಯತೆ ಆಧಾರದಲ್ಲಿ ಮುದ್ರಣಕ್ಕೆ ಬಾಕಿಯಿರುವ ಸಂಪುಟಗಳನ್ನು ಪರಿಶೀಲಿಸುತ್ತೇವೆ
– ಚನ್ನಪ್ಪ ಕಟ್ಟಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ
ಚನ್ನಪ್ಪ ಕಟ್ಟಿ
ಹಳೆಯ ಸಂಪುಟಗಳು
‘ಎ ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ’ ಪುಸ್ತಕದ ಐದು ಸಂಪುಟಗಳು ಭಾರತೀಯ ತತ್ತ್ವಶಾಸ್ತ್ರವನ್ನು ವ್ಯಾಖ್ಯಾನಿಸಿವೆ. 1922ರಲ್ಲಿ ಪ್ರಥಮ ಸಂಪುಟ ಪ್ರಕಟವಾಗಿತ್ತು. ಇಂಗ್ಲಿಷ್ ಸಂಪುಟಗಳು ಆನ್ಲೈನ್ ವೇದಿಕೆಯಲ್ಲಿ ಈಗಲೂ ಲಭ್ಯವಿವೆ. ಪ್ರತಿ ಸಂಪುಟವು 500ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿವೆ. ‘ಧರ್ಮಪಾಲ್’ ಸಂಪುಟಗಳು ಭಾರತದ ಇತಿಹಾಸ ಸಂಸ್ಕೃತಿ ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಯ ಕುರಿತು ಕೇಂದ್ರೀಕೃತವಾಗಿದ್ದವು. ಎಸ್.ವಿ. ಪರಮೇಶ್ವರ ಭಟ್ಟ ಅವರ ಸಮಗ್ರ ಸಾಹಿತ್ಯ ಸಂಪುಟದ ಮರುಮುದ್ರಣಕ್ಕೂ ಈ ಹಿಂದಿನ ಕಾರ್ಯಕಾರಿ ಸಮಿತಿ ಕ್ರಮವಹಿಸಿತ್ತು. ಆದರೆ ಈ ಪ್ರಕ್ರಿಯೆ ವೇಳೆಗೆ ಅವಧಿ ಪೂರ್ಣಗೊಂಡ ಕಾರಣ ಸಾಕಾರವಾಗಿರಲಿಲ್ಲ.