ರಂಗೋತ್ರಿ ಸಂಸ್ಥೆ ನಗರದಲ್ಲಿ ಆಯೋಜಿಸಿದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ಕುವೆಂಪು ಅವರು ಕನ್ನಡದ ಧೀಮಂತ ದಾರ್ಶನಿಕ. ಅವರೊಬ್ಬ ವಿಶ್ವಕವಿ. ಈಗ ನಾವು ಹಾಡುತ್ತಿರುವ ನಾಡಗೀತೆಯನ್ನು ಕುವೆಂಪು ಅವರು 1924ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿಯೇ ಬರೆದಿದ್ದರು. ಕುವೆಂಪು ಅವರು ದುಡಿಯುವನನ್ನು ಯೋಗಿ ಎಂದು ಕರೆದರು. ಎರಡು ನಾಡಗೀತೆಗಳನ್ನು ನೀಡಿದ ಕವಿ ಜಗತ್ತಿನಲ್ಲಿಯೇ ಇಲ್ಲ. ಅವರ ‘ಓ ನನ್ನ ಚೇತನ...’ ವಿಶ್ವದ ನಾಡಗೀತೆ’ ಎಂದರು.