ಕೆನರಾ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಶ್ರೀಕಾಂತ್ ಪತ್ರೇಮರ, ‘ವರಕವಿ ಬೇಂದ್ರೆಯವರಿಂದಲೇ ಯುಗದ ಕವಿ ಜಗದ ಕವಿ ಎಂದು ಪ್ರಶಂಸೆಗೊಳಗಾದ ಕುವೆಂಪು, ಒಬ್ಬ ದಾರ್ಶನಿಕ ಲೇಖಕರು. ಕನ್ನಡ ನಾಡು ಕಂಡ ಧೀಮಂತರಾದ ಟಿ.ಎಸ್.ವೆಂಕಣ್ಣಯ್ಯ, ಬಿಎಂಶ್ರೀ, ಎ.ಆರ್.ಕೃಷ್ಣಶಾಸ್ತ್ರಿ ಅವರ ಒಡನಾಟ ಮತ್ತು ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು’ ಎಂದರು.