<p>ಪ್ರಜಾವಾಣಿ ವಾರ್ತೆ</p>.<p><strong>ಬೆಂಗಳೂರು</strong>: ಸಾಮಾಜಿಕ ಬೆಸುಗೆಗಳನ್ನು ಕತ್ತರಿಸುವ ಕತ್ತರಿಗಳೇ ಜನಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದ ವ್ಯಕ್ತಪಡಿಸಿದರು.</p>.<p>‘ಮಾಧ್ಯಮ ಹಬ್ಬ-2026’ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪತ್ರಕರ್ತ, ಪತ್ರಕರ್ತೆಯರ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು. ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಎಚ್ಚರ ಇರಬೇಕು ಎಂದು ಸಲಹೆ ನೀಡಿದರು.</p>.<p>‘ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ’ ಎಂದು ವಿವರಿಸಿದರು.</p>.<p>ಅಂಕಣಕಾರ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಪತ್ರಕರ್ತರು ಏಳು ಪಾತಕಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.</p>.<p>ಅಜ್ಞಾನಿಗಳಾಗಿರಬಾರದು. ಆಳವಾದ ಅಧ್ಯಯನದ ಮೂಲಕ ಜ್ಞಾನ ಬೆಳೆಸಿಕೊಳ್ಳಬೇಕು. ಬೇಜವಾಬ್ದಾರಿಯಿಂದ ವರ್ತಿಸಬಾರದು. ಸಾಮಾಜಿಕ ಜವಾಬ್ದಾರಿಯನ್ನು ರೂಪಿಸಿಕೊಳ್ಳಬೇಕು. ಪೂರ್ವಗ್ರಹ ಪೀಡಿತರಾಗಬಾರದು. ಮುಕ್ತ ಆಲೋಚನೆಯ ಗುಣ ಬೆಳೆಸಿಕೊಳ್ಳಬೇಕು. ಅಸೂಕ್ಷ್ಮರಾಗಬಾರದು, ಸೂಕ್ಷ್ಮವಾಗಿರಬೇಕು. ಸಿನಿಕರಾಗಬಾರದು. ಕ್ರಿಯಾಶೀಲರಾಗಿರಬೇಕು. ನಂಬಿಕೆಗೆ ದ್ರೋಹ ಮಾಡಬಾರದು. ಆತ್ಮರತಿಗೆ ಈಡಾಗಬಾರದು. ಸರಳವಾಗಿ ಬದುಕಬೇಕು ಎಂದು ಪಾತಕಗಳನ್ನು ವಿವರಿಸಿದರು.</p>.<p>ಒಂದು ಕಾಲದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ವಿಫಲವಾದಾಗ ಮಾಧ್ಯಮ ಕೆಲಸ ಮಾಡುತ್ತಿತ್ತು. ಈಗ ಅಂಥ ಪತ್ರಿಕೋದ್ಯಮ ಕಾಣುತ್ತಿಲ್ಲ. ಹಿಂದೆ ಸಂಪಾದಕ ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ, ಪತ್ರಿಕೆಗಳಲ್ಲಿ ಸುದ್ದಿಗಳು ವಸ್ತುನಿಷ್ಠವಾಗಿರುತ್ತಿದ್ದವು. ಈಗ ಸಂಪಾದಕರು ಸೆಲೆಬ್ರಿಟಿಗಳಾಗಿದ್ದಾರೆ. ಯಾವ ಪತ್ರಕರ್ತರೂ ತಾವು ಮಾಡುವ ಸುದ್ದಿಗಿಂತ ದೊಡ್ಡವರಾಗಬಾರದು. ಪತ್ರಕರ್ತರ ಒಡನಾಟ ಒಳ್ಳೆಯವರೊಂದಿಗೆ ಇರಬೇಕು. ಭ್ರಷ್ಟರು, ಕೆಟ್ಟವರು, ಮೋಸಗಾರರೊಂದಿಗೆ ಒಡನಾಟ ಇರುವುದರಿಂದ ಅವೆಲ್ಲ ಸಾಮಾನ್ಯ ಎಂಬಂತಾಗಿದೆ ಎಂದರು.</p>.<p>ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಕುಲಸಚಿವ ನವೀನ್ ಜೋಸೆಫ್, ವಾರ್ತಾ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಉಪಸ್ಥಿತರಿದ್ದರು.</p>.<p><strong>ನೈತಿಕ ಚೌಕಟ್ಟು ಇಲ್ಲದ ಸಾಮಾಜಿಕ ಜಾಲತಾಣ</strong> </p><p>‘ಸಾಮಾಜಿಕ ಜಾಲತಾಣಗಳು ಬಂದಿರುವುದರಿಂದ ಅವಕಾಶಗಳು ವಿಶಾಲಗೊಂಡಿವೆ. ಆದರೆ ಅದೇ ಸಮಯದಲ್ಲಿ ಸಾಮಾಜಿಕ ನೈತಿಕತೆಯ ಚೌಕಟ್ಟು ಇಲ್ಲದೇ ಇರುವುದರಿಂದ ತಪ್ಪು ಸುದ್ದಿಗಳು ತಪ್ಪು ಸಂದೇಶಗಳೇ ಹೆಚ್ಚಾಗಿವೆ’ ಎಂದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್ ಹೇಳಿದರು. ‘ಸುದ್ದಿ ಬರೆಯುವುದು ಕೇವಲ ಉದ್ಯೋಗವಲ್ಲ. ಬರೆದು ಮುಗಿಸಿದ ಕೂಡಲೇ ಜವಾಬ್ದಾರಿ ಮುಗಿದು ಹೋಗುವುದಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿ ಮತ್ತು ಮೌಲ್ಯ. ಹಾಗಾಗಿ ನಾವು ಬರೆಯುವ ಸುದ್ದಿ ಉಂಟು ಮಾಡುವ ಪರಿಣಾಮ ಪರಿವರ್ತನೆಗಳು ಏನು ಎಂಬುದು ಗೊತ್ತಿರಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಬೆಂಗಳೂರು</strong>: ಸಾಮಾಜಿಕ ಬೆಸುಗೆಗಳನ್ನು ಕತ್ತರಿಸುವ ಕತ್ತರಿಗಳೇ ಜನಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದ ವ್ಯಕ್ತಪಡಿಸಿದರು.</p>.<p>‘ಮಾಧ್ಯಮ ಹಬ್ಬ-2026’ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪತ್ರಕರ್ತ, ಪತ್ರಕರ್ತೆಯರ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು. ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಎಚ್ಚರ ಇರಬೇಕು ಎಂದು ಸಲಹೆ ನೀಡಿದರು.</p>.<p>‘ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ’ ಎಂದು ವಿವರಿಸಿದರು.</p>.<p>ಅಂಕಣಕಾರ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಪತ್ರಕರ್ತರು ಏಳು ಪಾತಕಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.</p>.<p>ಅಜ್ಞಾನಿಗಳಾಗಿರಬಾರದು. ಆಳವಾದ ಅಧ್ಯಯನದ ಮೂಲಕ ಜ್ಞಾನ ಬೆಳೆಸಿಕೊಳ್ಳಬೇಕು. ಬೇಜವಾಬ್ದಾರಿಯಿಂದ ವರ್ತಿಸಬಾರದು. ಸಾಮಾಜಿಕ ಜವಾಬ್ದಾರಿಯನ್ನು ರೂಪಿಸಿಕೊಳ್ಳಬೇಕು. ಪೂರ್ವಗ್ರಹ ಪೀಡಿತರಾಗಬಾರದು. ಮುಕ್ತ ಆಲೋಚನೆಯ ಗುಣ ಬೆಳೆಸಿಕೊಳ್ಳಬೇಕು. ಅಸೂಕ್ಷ್ಮರಾಗಬಾರದು, ಸೂಕ್ಷ್ಮವಾಗಿರಬೇಕು. ಸಿನಿಕರಾಗಬಾರದು. ಕ್ರಿಯಾಶೀಲರಾಗಿರಬೇಕು. ನಂಬಿಕೆಗೆ ದ್ರೋಹ ಮಾಡಬಾರದು. ಆತ್ಮರತಿಗೆ ಈಡಾಗಬಾರದು. ಸರಳವಾಗಿ ಬದುಕಬೇಕು ಎಂದು ಪಾತಕಗಳನ್ನು ವಿವರಿಸಿದರು.</p>.<p>ಒಂದು ಕಾಲದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ವಿಫಲವಾದಾಗ ಮಾಧ್ಯಮ ಕೆಲಸ ಮಾಡುತ್ತಿತ್ತು. ಈಗ ಅಂಥ ಪತ್ರಿಕೋದ್ಯಮ ಕಾಣುತ್ತಿಲ್ಲ. ಹಿಂದೆ ಸಂಪಾದಕ ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ, ಪತ್ರಿಕೆಗಳಲ್ಲಿ ಸುದ್ದಿಗಳು ವಸ್ತುನಿಷ್ಠವಾಗಿರುತ್ತಿದ್ದವು. ಈಗ ಸಂಪಾದಕರು ಸೆಲೆಬ್ರಿಟಿಗಳಾಗಿದ್ದಾರೆ. ಯಾವ ಪತ್ರಕರ್ತರೂ ತಾವು ಮಾಡುವ ಸುದ್ದಿಗಿಂತ ದೊಡ್ಡವರಾಗಬಾರದು. ಪತ್ರಕರ್ತರ ಒಡನಾಟ ಒಳ್ಳೆಯವರೊಂದಿಗೆ ಇರಬೇಕು. ಭ್ರಷ್ಟರು, ಕೆಟ್ಟವರು, ಮೋಸಗಾರರೊಂದಿಗೆ ಒಡನಾಟ ಇರುವುದರಿಂದ ಅವೆಲ್ಲ ಸಾಮಾನ್ಯ ಎಂಬಂತಾಗಿದೆ ಎಂದರು.</p>.<p>ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಕುಲಸಚಿವ ನವೀನ್ ಜೋಸೆಫ್, ವಾರ್ತಾ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಉಪಸ್ಥಿತರಿದ್ದರು.</p>.<p><strong>ನೈತಿಕ ಚೌಕಟ್ಟು ಇಲ್ಲದ ಸಾಮಾಜಿಕ ಜಾಲತಾಣ</strong> </p><p>‘ಸಾಮಾಜಿಕ ಜಾಲತಾಣಗಳು ಬಂದಿರುವುದರಿಂದ ಅವಕಾಶಗಳು ವಿಶಾಲಗೊಂಡಿವೆ. ಆದರೆ ಅದೇ ಸಮಯದಲ್ಲಿ ಸಾಮಾಜಿಕ ನೈತಿಕತೆಯ ಚೌಕಟ್ಟು ಇಲ್ಲದೇ ಇರುವುದರಿಂದ ತಪ್ಪು ಸುದ್ದಿಗಳು ತಪ್ಪು ಸಂದೇಶಗಳೇ ಹೆಚ್ಚಾಗಿವೆ’ ಎಂದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್ ಹೇಳಿದರು. ‘ಸುದ್ದಿ ಬರೆಯುವುದು ಕೇವಲ ಉದ್ಯೋಗವಲ್ಲ. ಬರೆದು ಮುಗಿಸಿದ ಕೂಡಲೇ ಜವಾಬ್ದಾರಿ ಮುಗಿದು ಹೋಗುವುದಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿ ಮತ್ತು ಮೌಲ್ಯ. ಹಾಗಾಗಿ ನಾವು ಬರೆಯುವ ಸುದ್ದಿ ಉಂಟು ಮಾಡುವ ಪರಿಣಾಮ ಪರಿವರ್ತನೆಗಳು ಏನು ಎಂಬುದು ಗೊತ್ತಿರಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>