<p><strong>ಬೆಂಗಳೂರು</strong>: ಯುವಪ್ರತಿಭೆಗಳ ಕನಸು ನನಸುಗೊಳಿಸಲು ಬೇಕಾದ ಮಾರ್ಗದರ್ಶನ ಮತ್ತು ಸಂಪನ್ಮೂಲ ಒದಗಿಸಲು ಆಹ್ವಾನ ಫೌಂಡೇಷನ್ ‘ಲಕ್ಷ್ಯ’ ಎಂಬ ಹೊಸ ಯೋಜನೆಯನ್ನು ಗುರುವಾರ ಆರಂಭಿಸಿದೆ.</p>.<p>ಈ ಕಾರ್ಯಕ್ರಮದ ಮೂಲಕ ವರ್ಷಕ್ಕೆ 300ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಉದ್ದೇಶಿಸಿದೆ.</p>.<p>ಆರ್ಥಿಕ ಅಸಮಾನತೆ ಮತ್ತು ಗುಣಮಟ್ಟದ ಶಿಕ್ಷಣದ ಅಭಾವದಿಂದಾಗಿ ಅನೇಕ ಪ್ರತಿಭಾವಂತ ಮಕ್ಕಳಿಗೆ ನೈಜ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಅವರ ಕನಸುಗಳಿಗೆ ಅವರ ಪರಿಸ್ಥಿತಿಯೇ ಅಡ್ಡಿಯಾಗುತ್ತಿದೆ. ಇದನ್ನು ಹೋಗಲಾಡಿಸಲು ‘ಲಕ್ಷ್ಯ’ ಜನ್ಮ ತಾಳಿದೆ ಎಂದು ಫೌಂಡೇಷನ್ನವರು ಮಾಹಿತಿ ನೀಡಿದ್ದಾರೆ.</p>.<p>ಆಹ್ವಾನ ಫೌಂಡೇಷನ್ ಸಂಸ್ಥಾಪಕ ಬೃಜ್ಕಿಶೋರ್ ಪ್ರಧಾನ್ ಮಾತನಾಡಿ, ‘ಪ್ರತಿಯೊ್ಬ್ಬರಿಗೂ ಸರಿಯಾದ ಮಾರ್ಗದರ್ಶನ, ಸಂಪನ್ಮೂಲ ಮತ್ತು ಬೆಂಬಲ ಒದಗಿಸಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.</p>.<p>ಶಾಸಕ ಉದಯ ಗರುಡಾಚಾರ್, ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ, ನಟ ಸುಚೇಂದ್ರ ಪ್ರಸಾದ್, ಡಿಸಿಪಿ ಮಂಜುನಾಥ್ ಬಾಬು, ಶಾಸ್ತ್ರಿ ಆಯುರ್ಧಾಮ ಆಸ್ಪತ್ರೆಯ ಮುಖ್ಯ ಸಲಹೆಗಾರ ಸಿ.ಎ. ಕಿಶೋರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯುವಪ್ರತಿಭೆಗಳ ಕನಸು ನನಸುಗೊಳಿಸಲು ಬೇಕಾದ ಮಾರ್ಗದರ್ಶನ ಮತ್ತು ಸಂಪನ್ಮೂಲ ಒದಗಿಸಲು ಆಹ್ವಾನ ಫೌಂಡೇಷನ್ ‘ಲಕ್ಷ್ಯ’ ಎಂಬ ಹೊಸ ಯೋಜನೆಯನ್ನು ಗುರುವಾರ ಆರಂಭಿಸಿದೆ.</p>.<p>ಈ ಕಾರ್ಯಕ್ರಮದ ಮೂಲಕ ವರ್ಷಕ್ಕೆ 300ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಉದ್ದೇಶಿಸಿದೆ.</p>.<p>ಆರ್ಥಿಕ ಅಸಮಾನತೆ ಮತ್ತು ಗುಣಮಟ್ಟದ ಶಿಕ್ಷಣದ ಅಭಾವದಿಂದಾಗಿ ಅನೇಕ ಪ್ರತಿಭಾವಂತ ಮಕ್ಕಳಿಗೆ ನೈಜ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಅವರ ಕನಸುಗಳಿಗೆ ಅವರ ಪರಿಸ್ಥಿತಿಯೇ ಅಡ್ಡಿಯಾಗುತ್ತಿದೆ. ಇದನ್ನು ಹೋಗಲಾಡಿಸಲು ‘ಲಕ್ಷ್ಯ’ ಜನ್ಮ ತಾಳಿದೆ ಎಂದು ಫೌಂಡೇಷನ್ನವರು ಮಾಹಿತಿ ನೀಡಿದ್ದಾರೆ.</p>.<p>ಆಹ್ವಾನ ಫೌಂಡೇಷನ್ ಸಂಸ್ಥಾಪಕ ಬೃಜ್ಕಿಶೋರ್ ಪ್ರಧಾನ್ ಮಾತನಾಡಿ, ‘ಪ್ರತಿಯೊ್ಬ್ಬರಿಗೂ ಸರಿಯಾದ ಮಾರ್ಗದರ್ಶನ, ಸಂಪನ್ಮೂಲ ಮತ್ತು ಬೆಂಬಲ ಒದಗಿಸಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.</p>.<p>ಶಾಸಕ ಉದಯ ಗರುಡಾಚಾರ್, ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ, ನಟ ಸುಚೇಂದ್ರ ಪ್ರಸಾದ್, ಡಿಸಿಪಿ ಮಂಜುನಾಥ್ ಬಾಬು, ಶಾಸ್ತ್ರಿ ಆಯುರ್ಧಾಮ ಆಸ್ಪತ್ರೆಯ ಮುಖ್ಯ ಸಲಹೆಗಾರ ಸಿ.ಎ. ಕಿಶೋರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>