‘ಚಳಿಗಾಲದಲ್ಲಿ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತವೆ. ಉದ್ಯಾನದಲ್ಲಿ ಎಲೆಗಳು ಮಾತ್ರವಲ್ಲದೆ, ಸಸಿಗಳನ್ನು ವಿನ್ಯಾಸಗೊಳಿಸುವ ವೇಳೆಯೂ ಹಸಿ ತ್ಯಾಜ್ಯ ಸಂಗ್ರಹವಾಗುತ್ತದೆ. ಅವುಗಳನ್ನು ಪ್ರತಿದಿನ ಸಂಗ್ರಹಿಸಿ, ಒಂದು ಗುಂಡಿಯಲ್ಲಿ ಹಾಕಲಾಗುತ್ತದೆ. ಬಳಿಕ ಕೃಷಿ ತ್ಯಾಜ್ಯ, ಸಗಣಿ ಹಾಗೂ ಎರೆಹುಳುಗಳನ್ನು ಸೇರಿಸಲಾಗುವುದು.ಕೆಲ ದಿನಗಳ ನಂತರ ಅವು ಕೊಳೆಯಲಾರಂಭಿಸುತ್ತವೆ. ಇವು ಕ್ರಮೇಣ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತವೆ. ಇದಕ್ಕಾಗಿ ಉದ್ಯಾನದಲ್ಲಿ ಪ್ರತ್ಯೇಕ ಜಾಗ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.