ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ವಿವಾದ : ಮಾವಿನ ಮರಗಳ ಮಾರಣಹೋಮ

Last Updated 2 ಸೆಪ್ಟೆಂಬರ್ 2018, 19:24 IST
ಅಕ್ಷರ ಗಾತ್ರ

ಹೊಸಕೋಟೆ: ಗುಂಪೊಂದು ಅಕ್ರಮವಾಗಿ ಮಾವಿನ ತೋಪಿಗೆ ನುಗ್ಗಿ ಅಲ್ಲಿದ್ದ 100 ಮಾವಿನ ಮರಗಳನ್ನು ಕೊಡಲಿಯಿಂದ ಕಡಿದು ನೆಲಕ್ಕುರುಳಿಸಿದ ಘಟನೆ ತಾಲ್ಲೂಕಿನ ಯಲಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇದರಿಂದ ಸುಮಾರು ₹ 15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಬಿಳಿಶಿವಾಲೆ ಗ್ರಾಮದ ಲಕ್ಷ್ಮಣ್ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ.

’ಸುಮಾರು 20 ವರ್ಷಗಳ ಹಿಂದಿನ ಆ ಮಾವಿನ ಮರಗಳನ್ನು 6.12 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು ಉತ್ತಮ ಫಸಲು ನೀಡುತ್ತಿದ್ದವು. 2006ರಲ್ಲಿ ನಮ್ಮ ತಂದೆ ಆ ಜಮೀನನ್ನು ಕೊಂಡಿದ್ದು ಅವರ ಮರಣದ ನಂತರ ಅದು ನನ್ನ ಹೆಸರಿಗೆ ವರ್ಗಾವಣೆ ಆಗಿತ್ತು. ಶನಿವಾರ ದೊಡ್ಡದೇನಹಳ್ಳಿ ವಾಸಿಗಳಾದ ಚೌಡಪ್ಪ ಹಾಗೂ ಇತರ 6 ಜನ ಏಕಾಏಕಿ ಮಾವಿನ ತೋಪಿಗೆ ನುಗ್ಗಿ ಮರಗಳನ್ನು ಕಡಿದಿದ್ದಾರೆ. ಜತೆಗೆ ಕಾಂಪೌಂಡ್ ಹಾಕಿಸಲು ಹಾಕಿದ್ದ 250 ಕಲ್ಲು ಕಂಬಗಳನ್ನೂ ಸಹ ಧ್ವಂಸ ಮಾಡಿದ್ದಾರೆ. ಪ್ರಶ್ನಿಸಿದ ನನಗೆ ಈ ಜಮೀನು ನಮಗೆ ಸೇರಿದ್ದು ಇಲ್ಲಿಂದ ಆಚೆ ಹೋಗದಿದ್ದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು’ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT