’ಸುಮಾರು 20 ವರ್ಷಗಳ ಹಿಂದಿನ ಆ ಮಾವಿನ ಮರಗಳನ್ನು 6.12 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು ಉತ್ತಮ ಫಸಲು ನೀಡುತ್ತಿದ್ದವು. 2006ರಲ್ಲಿ ನಮ್ಮ ತಂದೆ ಆ ಜಮೀನನ್ನು ಕೊಂಡಿದ್ದು ಅವರ ಮರಣದ ನಂತರ ಅದು ನನ್ನ ಹೆಸರಿಗೆ ವರ್ಗಾವಣೆ ಆಗಿತ್ತು. ಶನಿವಾರ ದೊಡ್ಡದೇನಹಳ್ಳಿ ವಾಸಿಗಳಾದ ಚೌಡಪ್ಪ ಹಾಗೂ ಇತರ 6 ಜನ ಏಕಾಏಕಿ ಮಾವಿನ ತೋಪಿಗೆ ನುಗ್ಗಿ ಮರಗಳನ್ನು ಕಡಿದಿದ್ದಾರೆ. ಜತೆಗೆ ಕಾಂಪೌಂಡ್ ಹಾಕಿಸಲು ಹಾಕಿದ್ದ 250 ಕಲ್ಲು ಕಂಬಗಳನ್ನೂ ಸಹ ಧ್ವಂಸ ಮಾಡಿದ್ದಾರೆ. ಪ್ರಶ್ನಿಸಿದ ನನಗೆ ಈ ಜಮೀನು ನಮಗೆ ಸೇರಿದ್ದು ಇಲ್ಲಿಂದ ಆಚೆ ಹೋಗದಿದ್ದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು’ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.