ಸರ್ಜಾಪುರ ಹೋಬಳಿಯ ತಿಂಡ್ಲು ಗ್ರಾಮದಲ್ಲಿ ಒತ್ತುವರಿ ಮಾಡಿದ್ದ 10 ಗುಂಟೆ ಸರ್ಕಾರಿ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಚಿಕ್ಕದುನ್ನಸಂದ್ರ ಗ್ರಾಮದಲ್ಲಿ ಸಾಬೀಕ್ ಕಂಪನಿ ಒತ್ತುವರಿ ಮಾಡಿದ್ದ 10 ಗುಂಟೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಮುತ್ತಾನಲ್ಲೂರು ಗ್ರಾಮದಲ್ಲಿ ಒತ್ತುವರಿ ಮಾಡಿದ್ದ 4 ಗುಂಟೆ ಸರ್ಕಾರಿ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಪಿ.ದಿನೇಶ್ ತಿಳಿಸಿದರು.