‘ಅವಳಿ ನಗರದಲ್ಲಿ ಗುತ್ತಿಗೆದಾರರ ಉಪಟಳ ಹೆಚ್ಚಾಗಿದೆ. ನಕಲಿ ಪೌರಕಾರ್ಮಿಕರು ಪಾಲಿಕೆಯಲ್ಲಿ ಸೇರಿಕೊಂಡಿದ್ದು, ಅವರನ್ನು ಕೆಲಸದಿಂದ ಹೊರ ಕಳುಹಿಸಬೇಕು. ನಿರ್ಭೀತಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಗುತ್ತಿಗೆದಾರನನ್ನು ಬಂಧಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಬುಧವಾರದಿಂದ ಸ್ವಚ್ಛತೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.