ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಯ ಮಾಹಿತಿ ಪಡೆಯುವ ಸಲುವಾಗಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬುಧವಾರ ಭೇಟಿ ಮಾಡಿದರು.
ಬಳಿಕ ಮಾತನಾಡಿ,' ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಕಮಿಷನರ್ ಬಳಿ ಕೇಳಿದ್ದೇನೆ. ಗಲಭೆಯಲ್ಲಿ ನನ್ನ ಮನೆ ಸುಟ್ಟಿದ್ದು, ಈ ವಿಚಾರವಾಗಿ ಬಹಳ ನೋವಿದೆ. ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ' ಎಂದರು.