ಕಳೆದ ಎರಡು ವರ್ಷಗಳಲ್ಲಿ ಕೆರೆ, ಚೆಕ್ಡ್ಯಾಂ ಹಾಗೂ ಹೊಂಡಗಳನ್ನು ನಿರ್ಮಿಸುವ ಕಾರ್ಯ ಹೆಚ್ಚಾಗಿದೆ. ಮಳೆಗಾಲದಲ್ಲಿ ಬರುವ ನೀರು ವನ್ಯಜೀವಿಗಳಿಗೆ ಸಹಾಯಕವಾಗಿದೆ. ಆದರೂ ಬೇಸಿಗೆಯ ತೀವ್ರತೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅಡವಿಯಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದಂತೆ ವನ್ಯಜೀವಿಗಳು ಊರಿನತ್ತ ಹೆಜ್ಜೆ ಹಾಕುತ್ತವೆ. ಅಷ್ಟೇ ಅಲ್ಲದೇ ಕೋತಿ, ಮಂಗ, ನಾಯಿ, ಜಾನುವಾರುಗಳು ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿವೆ. ಪಟ್ಟಣಗಳಲ್ಲಿ ಮನೆಯ ಹೊರಗಡೆ ಇಡಲಾದ ಬ್ಯಾರಲ್, ಬಕೆಟ್ ಹಾಗೂ ನಲ್ಲಿ ನೀರಿನಲ್ಲಿ ನೀರು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿವೆ.