<p><strong>ಬೆಂಗಳೂರು</strong>: ಕರ್ನಾಟಕ ಲೇಖಕಿಯರ ಸಂಘವು (ಕಲೇಸಂ) 2025ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. </p>.<p>ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ. ‘ಶ್ರೀಮತಿ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ಗೆ (ಶಿಕ್ಷಕಿ ಹಾಗೂ ಲೇಖಕಿ) ದಾವಣಗೆರೆಯ ಬಿ.ಟಿ. ಗೀತಾ ಮಂಜು, ‘ಶ್ರೀಮತಿ ಶ್ರೀಲೇಖಾ’ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ಭೂಮಿಕಾ ಆರ್. ಅವರ ‘ಜೊರಾಮಿ’ ಕೃತಿ, ‘ಶ್ರೀಮತಿ ಭಾಗ್ಯ ನಂಜಪ್ಪ’ ಪ್ರಶಸ್ತಿಗೆ (ವಿಜ್ಞಾನ ಸಾಹಿತ್ಯ) ಸುಕನ್ಯಾ ಸೂನಗಹಳ್ಳಿ ಅವರ ‘ಕಬ್ಬಿನ ಸಿಹಿ ವರ್ಧಿಸಿದ ಅಮ್ಮ-ಡಾ. ಜಾನಕಿ ಅಮ್ಮಾಳ್’ ಕೃತಿ, ‘ಶ್ರೀಮತಿ ಜಿ.ವಿ. ನಿರ್ಮಲ’ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ವೀಣಾ ಮುರುಳೀಧರ್ ಅವರ ‘ಚನ್ನೆಮಣೆಯ ಜಗತ್ತು’ ಕೃತಿ ಆಯ್ಕೆಯಾಗಿದೆ. </p>.<p>‘ಶ್ರೀಮತಿ ಉಷಾ ಪಿ. ರೈ’ ಪ್ರಶಸ್ತಿಗೆ (ಕಾವ್ಯ) ಪ್ರಜ್ಞಾ ಮತ್ತಿಹಳ್ಳಿ ಅವರ ‘ಬೆಳದಿಂಗಳ ಸೋನೆಮಳೆ’ ಕೃತಿ, ‘ಶ್ರೀಮತಿ ನಾಗರತ್ನ ಚಂದ್ರಶೇಖರ್’ ಪ್ರಶಸ್ತಿಗೆ (ಲಲಿತ ಪ್ರಬಂಧ) ಸುಚಿತ್ರಾ ಹೆಗಡೆ ಅವರ ‘ಮಿಂಚುಹುಳದ ದಾರಿ’ ಕೃತಿ, ‘ಡಾ.ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ಗೆ ಮಮತಾ ಅರಸೀಕೆರೆ ಅವರ ‘ಗಾಯಗಳಿಗೆ ವಿದಾಯ ಹೇಳಬೇಕು’ ಕೃತಿ, ‘ಶ್ರೀಮತಿ ಸಂಕಮ್ಮ ಸಂಕಣ್ಣನವರ್ ಕಾವ್ಯ ಪ್ರಶಸ್ತಿ’ಗೆ ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕೃತಿ ಭಾಜನವಾಗಿದೆ. </p>.<p>‘ಶ್ರೀಜಯ ಕಲಕೋಟಿ ಪ್ರಶಸ್ತಿ’ಗೆ (ವಚನ ಸಾಹಿತ್ಯ) ಇಂದಿರಾ ಮೋಟೆಬೆನ್ನೂರ ಅವರ ‘ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು’ ಕೃತಿ, ‘ಶ್ರೀಮತಿ ಸುಶೀಲಾ ಸೋಮಶೇಖರ್’ ಪ್ರಶಸ್ತಿಗೆ (ವಚನ ಸಾಹಿತ್ಯ) ದಾಕ್ಷಾಯಣಿ ಜಯದೇವಪ್ಪ ಅವರ ‘ದಾಕ್ಷಾಯಣಿ ವಚನಗಳು’ ಕೃತಿ, ‘ಶ್ರೀಮತಿ ಲಕ್ಷ್ಮಿದೇವಮ್ಮ ಕಥಾ ಪ್ರಶಸ್ತಿ’ಗೆ (ಮಲ್ಲಿಕಾ ಬಸವರಾಜು) ಕುಸುಮಾ ಆಯರಹಳ್ಳಿ ಅವರ ‘ಕಪಿಲೆ ಕಂಡ ಕತೆಗಳು’ ಕೃತಿ, ‘ಶ್ರೀಮತಿ ನಿರುಪಮಾ’ ಪ್ರಶಸ್ತಿಗೆ (ಕತೆಗಳು) ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಭವ್ಯ ಅಶೋಕ್ ಸಂಪಗಾರ ಅವರ ‘ಗುಡ್ಡದ ತಿರುವು’ ಹಾಗೂ ಮುದ್ರಣ ಮಾಧ್ಯಮ ವಿಭಾಗದಲ್ಲಿ ದೀಪಿಕಾ ಚಾಟೆ ಅವರ ‘ಚಿಗುರಿದ ಆತ್ಮವಿಶ್ವಾಸ’ ಕೃತಿ ಆಯ್ಕೆಯಾಗಿದೆ. </p>.<p>‘ಶ್ರೀಮತಿ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್’ ಲೇಖಕಿ ಹಾಗೂ ಪ್ರಕಾಶಕಿ ಪ್ರಶಸ್ತಿಗೆ ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ. ‘ಶ್ರೀಮತಿ ತ್ರಿವೇಣಿ ದತ್ತಿನಿಧಿ’ ವಿಭಾಗದಲ್ಲಿ (ಕಥಾ ಸಂಕಲನ) ವಿಜಯಶ್ರೀ ಹಾಲಾಡಿ ಅವರ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಪ್ರಥಮ, ಎಡೆಯೂರು ಪಲ್ಲವಿ ಅವರ ‘ಕುಂಡದ ಬೇರು’ ದ್ವಿತೀಯ ಹಾಗೂ ಪೂರ್ಣಿಮಾ ಭಟ್ಟ ಅವರ ‘ಕತೆ ಜಾರಿಯಲ್ಲಿರಲಿ’ ಕಥಾ ಸಂಕಲನ ತೃತೀಯ ಸ್ಥಾನ ಪಡೆದಿದೆ. </p>.<p>‘ಶ್ರೀಮತಿ ಕಾಕೋಳು ಸರೋಜಮ್ಮ’ ಪ್ರಶಸ್ತಿಗೆ (ಕಾದಂಬರಿ) ಪೌಜಿಯಾ ಸಲೀಂ ಅವರ ‘ಹರ್ಷರಾಗ’ ಕೃತಿ, ‘ಶ್ರೀಮತಿ ಕಮಲಾ ರಾಮಸ್ವಾಮಿ’ ಪ್ರಶಸ್ತಿಗೆ (ಪ್ರವಾಸ ಸಾಹಿತ್ಯ) ಡಿ. ಮಂಗಳಾ ಪ್ರಿಯದರ್ಶಿನಿ ಅವರ ‘ನಾ ಕಂಡ ಉಗಾಂಡ’ ಕೃತಿ, ‘ಶ್ರೀಮತಿ ನುಗ್ಗೆಹಳ್ಳಿ ಪಂಕಜ’ ಪ್ರಶಸ್ತಿಗೆ (ಹಾಸ್ಯ ಕೃತಿ) ‘ನಳಿನಿ ಟಿ. ಭೀಮಪ್ಪ ಅವರ ‘ನಾಕೊಂದ್ಲ ನಾಕು’ ಕೃತಿ, ‘ಶ್ರೀಮತಿ ಗುಣಸಾಗರಿ ನಾಗರಾಜ್’ ಪ್ರಶಸ್ತಿಗೆ (ಮಕ್ಕಳ ಸಾಹಿತ್ಯ) ಮೀನಾ ಮೈಸೂರು ಅವರ ‘ಸೂರ್ಯನ ಸೆರೆ’ ಕೃತಿ ಆಯ್ಕೆಯಾಗಿದೆ.</p>.<p>‘ಶ್ರೀಮತಿ ಇಂದಿರಾ ವಾಣಿರಾವ್’ ಪ್ರಶಸ್ತಿಗೆ (ನಾಟಕ) ವಿನುತಾ ಹಂಚಿನಮನಿ ಅವರ ‘ಅಪರಾಜಿತೆಯರು’ ಕೃತಿ, ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ (ಕಾದಂಬರಿ ಪ್ರಕಾರ-ಸುಧಾ ಮೂರ್ತಿ ಪ್ರಾಯೋಜಿತ) ಜ.ನಾ. ತೇಜಶ್ರೀ ಅವರ ‘ಜೀವರತಿ’ ಕೃತಿ ಹಾಗೂ ‘ಶ್ರೀಮತಿ ಜಯಮ್ಮ ಕರಿಯಣ್ಣ’ ಪ್ರಶಸ್ತಿಗೆ (ಸಂಶೋಧನೆ) ಲಕ್ಷ್ಮಿದೇವಿ ಶಾಸ್ತ್ರಿ ಅವರ ‘ರಾಯಚೂರು ಕೋಟೆಗೆ ನರಬಲಿ’ ಕೃತಿ ಭಾಜನವಾಗಿದೆ. </p>.<p>‘ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಏಪ್ರಿಲ್ 9 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ಆರ್. ಸುನಂದಮ್ಮ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಲೇಖಕಿಯರ ಸಂಘವು (ಕಲೇಸಂ) 2025ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. </p>.<p>ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ. ‘ಶ್ರೀಮತಿ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ಗೆ (ಶಿಕ್ಷಕಿ ಹಾಗೂ ಲೇಖಕಿ) ದಾವಣಗೆರೆಯ ಬಿ.ಟಿ. ಗೀತಾ ಮಂಜು, ‘ಶ್ರೀಮತಿ ಶ್ರೀಲೇಖಾ’ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ಭೂಮಿಕಾ ಆರ್. ಅವರ ‘ಜೊರಾಮಿ’ ಕೃತಿ, ‘ಶ್ರೀಮತಿ ಭಾಗ್ಯ ನಂಜಪ್ಪ’ ಪ್ರಶಸ್ತಿಗೆ (ವಿಜ್ಞಾನ ಸಾಹಿತ್ಯ) ಸುಕನ್ಯಾ ಸೂನಗಹಳ್ಳಿ ಅವರ ‘ಕಬ್ಬಿನ ಸಿಹಿ ವರ್ಧಿಸಿದ ಅಮ್ಮ-ಡಾ. ಜಾನಕಿ ಅಮ್ಮಾಳ್’ ಕೃತಿ, ‘ಶ್ರೀಮತಿ ಜಿ.ವಿ. ನಿರ್ಮಲ’ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ವೀಣಾ ಮುರುಳೀಧರ್ ಅವರ ‘ಚನ್ನೆಮಣೆಯ ಜಗತ್ತು’ ಕೃತಿ ಆಯ್ಕೆಯಾಗಿದೆ. </p>.<p>‘ಶ್ರೀಮತಿ ಉಷಾ ಪಿ. ರೈ’ ಪ್ರಶಸ್ತಿಗೆ (ಕಾವ್ಯ) ಪ್ರಜ್ಞಾ ಮತ್ತಿಹಳ್ಳಿ ಅವರ ‘ಬೆಳದಿಂಗಳ ಸೋನೆಮಳೆ’ ಕೃತಿ, ‘ಶ್ರೀಮತಿ ನಾಗರತ್ನ ಚಂದ್ರಶೇಖರ್’ ಪ್ರಶಸ್ತಿಗೆ (ಲಲಿತ ಪ್ರಬಂಧ) ಸುಚಿತ್ರಾ ಹೆಗಡೆ ಅವರ ‘ಮಿಂಚುಹುಳದ ದಾರಿ’ ಕೃತಿ, ‘ಡಾ.ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ಗೆ ಮಮತಾ ಅರಸೀಕೆರೆ ಅವರ ‘ಗಾಯಗಳಿಗೆ ವಿದಾಯ ಹೇಳಬೇಕು’ ಕೃತಿ, ‘ಶ್ರೀಮತಿ ಸಂಕಮ್ಮ ಸಂಕಣ್ಣನವರ್ ಕಾವ್ಯ ಪ್ರಶಸ್ತಿ’ಗೆ ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕೃತಿ ಭಾಜನವಾಗಿದೆ. </p>.<p>‘ಶ್ರೀಜಯ ಕಲಕೋಟಿ ಪ್ರಶಸ್ತಿ’ಗೆ (ವಚನ ಸಾಹಿತ್ಯ) ಇಂದಿರಾ ಮೋಟೆಬೆನ್ನೂರ ಅವರ ‘ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು’ ಕೃತಿ, ‘ಶ್ರೀಮತಿ ಸುಶೀಲಾ ಸೋಮಶೇಖರ್’ ಪ್ರಶಸ್ತಿಗೆ (ವಚನ ಸಾಹಿತ್ಯ) ದಾಕ್ಷಾಯಣಿ ಜಯದೇವಪ್ಪ ಅವರ ‘ದಾಕ್ಷಾಯಣಿ ವಚನಗಳು’ ಕೃತಿ, ‘ಶ್ರೀಮತಿ ಲಕ್ಷ್ಮಿದೇವಮ್ಮ ಕಥಾ ಪ್ರಶಸ್ತಿ’ಗೆ (ಮಲ್ಲಿಕಾ ಬಸವರಾಜು) ಕುಸುಮಾ ಆಯರಹಳ್ಳಿ ಅವರ ‘ಕಪಿಲೆ ಕಂಡ ಕತೆಗಳು’ ಕೃತಿ, ‘ಶ್ರೀಮತಿ ನಿರುಪಮಾ’ ಪ್ರಶಸ್ತಿಗೆ (ಕತೆಗಳು) ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಭವ್ಯ ಅಶೋಕ್ ಸಂಪಗಾರ ಅವರ ‘ಗುಡ್ಡದ ತಿರುವು’ ಹಾಗೂ ಮುದ್ರಣ ಮಾಧ್ಯಮ ವಿಭಾಗದಲ್ಲಿ ದೀಪಿಕಾ ಚಾಟೆ ಅವರ ‘ಚಿಗುರಿದ ಆತ್ಮವಿಶ್ವಾಸ’ ಕೃತಿ ಆಯ್ಕೆಯಾಗಿದೆ. </p>.<p>‘ಶ್ರೀಮತಿ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್’ ಲೇಖಕಿ ಹಾಗೂ ಪ್ರಕಾಶಕಿ ಪ್ರಶಸ್ತಿಗೆ ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ. ‘ಶ್ರೀಮತಿ ತ್ರಿವೇಣಿ ದತ್ತಿನಿಧಿ’ ವಿಭಾಗದಲ್ಲಿ (ಕಥಾ ಸಂಕಲನ) ವಿಜಯಶ್ರೀ ಹಾಲಾಡಿ ಅವರ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಪ್ರಥಮ, ಎಡೆಯೂರು ಪಲ್ಲವಿ ಅವರ ‘ಕುಂಡದ ಬೇರು’ ದ್ವಿತೀಯ ಹಾಗೂ ಪೂರ್ಣಿಮಾ ಭಟ್ಟ ಅವರ ‘ಕತೆ ಜಾರಿಯಲ್ಲಿರಲಿ’ ಕಥಾ ಸಂಕಲನ ತೃತೀಯ ಸ್ಥಾನ ಪಡೆದಿದೆ. </p>.<p>‘ಶ್ರೀಮತಿ ಕಾಕೋಳು ಸರೋಜಮ್ಮ’ ಪ್ರಶಸ್ತಿಗೆ (ಕಾದಂಬರಿ) ಪೌಜಿಯಾ ಸಲೀಂ ಅವರ ‘ಹರ್ಷರಾಗ’ ಕೃತಿ, ‘ಶ್ರೀಮತಿ ಕಮಲಾ ರಾಮಸ್ವಾಮಿ’ ಪ್ರಶಸ್ತಿಗೆ (ಪ್ರವಾಸ ಸಾಹಿತ್ಯ) ಡಿ. ಮಂಗಳಾ ಪ್ರಿಯದರ್ಶಿನಿ ಅವರ ‘ನಾ ಕಂಡ ಉಗಾಂಡ’ ಕೃತಿ, ‘ಶ್ರೀಮತಿ ನುಗ್ಗೆಹಳ್ಳಿ ಪಂಕಜ’ ಪ್ರಶಸ್ತಿಗೆ (ಹಾಸ್ಯ ಕೃತಿ) ‘ನಳಿನಿ ಟಿ. ಭೀಮಪ್ಪ ಅವರ ‘ನಾಕೊಂದ್ಲ ನಾಕು’ ಕೃತಿ, ‘ಶ್ರೀಮತಿ ಗುಣಸಾಗರಿ ನಾಗರಾಜ್’ ಪ್ರಶಸ್ತಿಗೆ (ಮಕ್ಕಳ ಸಾಹಿತ್ಯ) ಮೀನಾ ಮೈಸೂರು ಅವರ ‘ಸೂರ್ಯನ ಸೆರೆ’ ಕೃತಿ ಆಯ್ಕೆಯಾಗಿದೆ.</p>.<p>‘ಶ್ರೀಮತಿ ಇಂದಿರಾ ವಾಣಿರಾವ್’ ಪ್ರಶಸ್ತಿಗೆ (ನಾಟಕ) ವಿನುತಾ ಹಂಚಿನಮನಿ ಅವರ ‘ಅಪರಾಜಿತೆಯರು’ ಕೃತಿ, ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ (ಕಾದಂಬರಿ ಪ್ರಕಾರ-ಸುಧಾ ಮೂರ್ತಿ ಪ್ರಾಯೋಜಿತ) ಜ.ನಾ. ತೇಜಶ್ರೀ ಅವರ ‘ಜೀವರತಿ’ ಕೃತಿ ಹಾಗೂ ‘ಶ್ರೀಮತಿ ಜಯಮ್ಮ ಕರಿಯಣ್ಣ’ ಪ್ರಶಸ್ತಿಗೆ (ಸಂಶೋಧನೆ) ಲಕ್ಷ್ಮಿದೇವಿ ಶಾಸ್ತ್ರಿ ಅವರ ‘ರಾಯಚೂರು ಕೋಟೆಗೆ ನರಬಲಿ’ ಕೃತಿ ಭಾಜನವಾಗಿದೆ. </p>.<p>‘ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಏಪ್ರಿಲ್ 9 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ಆರ್. ಸುನಂದಮ್ಮ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>