‘ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿದ ರಾಷ್ಟ್ರ ಭಾರತ. ಈ ಪರಂಪರೆಯನ್ನು ಉಳಿಸಲು ನಾವು ಕಾರ್ಯೋನ್ಮುಖವಾಗಬೇಕು. ಆಗಮ, ಶಿಲ್ಪಶಾಶ್ತ್ರ ಮತ್ತು ಮೇಲುಕೋಟೆಯಲ್ಲಿರುವ ಮಠಕ್ಕೆ ಅವಿನಾಭಾವ ಸಂಬಂಧವಿದೆ. 12ನೇ ಶತಮಾನದಲ್ಲಿ ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ರಾಮಾನುಜಾಚಾರ್ಯರು ಭಾರತದ ತುಂಬೆಲ್ಲಾ ಸಂಚರಿಸಿ, ದೇಶದಲ್ಲಿ ಸಾಂಸ್ಕೃತಿಕ ಸಂಚಲನ ಕ್ರಾಂತಿಯನ್ನು ಉಂಟುಮಾಡಿದರು. ಇದೇ ಮಹತ್ವದ ಕಾರ್ಯವನ್ನು ನಮ್ಮ ದೇಶದಲ್ಲಿ ಇತರ ಅನೇಕ ಸಂತರು ಸಹ ಮಾಡಿದ್ದಾರೆ’ ಎಂದು ಹೇಳಿದರು.