ಬೆಳೆ ನಾಶವಾಗಿರುವುದರಿಂದ ಮೂರು ತಿಂಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಇನ್ನೂ 3 ತಿಂಗಳು ಯಾವುದೇ ಮದುವೆ, ಸಾರ್ವಜನಿಕ ಕಾರ್ಯಕ್ರಮ ಹಾಗೂ ಶುಭ ಸಮಾರಂಭಗಳು ನಡೆಯದ ಕಾರಣ, ತೀವ್ರಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ರೈತರಿಗೆ ಪ್ರತಿತಿಂಗಳು ರಸಗೊಬ್ಬರ, ಔಷಧ, ಸಾರಿಗೆ, ವಿದ್ಯುತ್ ಬಿಲ್, ಕೂಲಿಗಾರರ ವೇತನಕ್ಕಾಗಿ ತಗಲುವ ₹1.25 ಲಕ್ಷ ನಿರ್ವಹಣಾ ವೆಚ್ಚವನ್ನಾದರೂ ಭರಿಸಬೇಕು ಎಂದು ಸಂಘದ ಮತ್ತೊಬ್ಬ ನಿರ್ದೇಶಕ ಬಿ.ಶ್ರೀಕಾಂತ್ ತಿಳಿಸಿದರು.